ಬೆಂಗಳೂರ : ಇನ್ನು ಕೊರೋನಾ ಸೋಂಕಿನ ಪ್ರಕರಣ ಕಂಡುಬಂದರೆ ಅಂತವರ ಮನೆಗಳನ್ನು ಅಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ. ರಸ್ತೆಯನ್ನು ಸೀಲ್ ಡೌನ್ ಮಾಡುವ ಕ್ರಮವನ್ನು ಕೈಬಿಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಇಲ್ಲಿ ತನಕ ಕೊರೋನಾ ಪ್ರಕರಣ ಪತ್ತೆಯಾದಂತ ಏರಿಯಾ, ರಸ್ತೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತಿತ್ತು. ಆದ್ರೇ ಇನ್ಮುಂದೆ ಕೊರೋನಾ ಮನೆಯನ್ನಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ. ಪ್ರಕರಣ ಪತ್ತೆಯಾದಂತ ರಸ್ತೆಯನ್ನು ಸೀಲ್ ಡೌನ್ ಮಾಡುವ ಕ್ರಮವನ್ನು ಕೈಬಿಡಲಾಗುತ್ತಿದೆ ಎಂದರು.