ಹೊಸದಿಗಂತ ವರದಿ, ಮೈಸೂರು:
ಒಂಟಿ ಸಲಗವೊಂದು ನಡೆಸಿದ ದಾಳಿಯಿಂದ ತೋಟದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗಳು ಹಾಗೂ ಮನೆಯೊಂದು ಜಖಂಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಾಗರಹೊಳೆ ಬಳಿಯ ಮುದಗನೂರು ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ ಮುದಗನೂರಿನ ಶ್ರೀನಿವಾಸ್ ಮತ್ತು ಮುಖೇಶ್ ಎಂಬ ರೈತರ ಎರಡು ಟ್ರ್ಯಾಕ್ಟರ್ ಗಳು ಆನೆ ದಾಳಿಯಿಂದ ಹಾನಿಗೊಳಗಾಗಿವೆ. ಜೊತೆಗೆ ಗಿರಿಜನ ನಿವಾಸಿ ಕೂಸಪ್ಪ ಅವರ ಮನೆ ಮೇಲೆಯೂ ದಾಳಿ ಮಾಡಿದ್ದು, ಹೂವಿನಕುಂಡ ಹಾಗೂ ಮನೆಯ ಸೂರನ್ನು ಧ್ವಂಸಗೊಳಿಸಿವೆ. ದಾಳಿ ವೇಳೆ ಒಂಟಿಸಲಗದ ದಂತದ ಸ್ವಲ್ಪ ಭಾಗ ಮುರಿದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಒಂಟಿ ಸಲಗದ ಮುರಿದು ಬಿದ್ದಿ ದಂತದ ಚೂರನ್ನು ವಶಕ್ಕೆ ಪಡೆದಿದ್ದಾರೆ.