ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 27 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ವೀರಾಜಪೇಟೆ ಚಿಕ್ಕಪೇಟೆಯ ಆಂಜನೇಯ ದೇವಾಲಯ ಸಮೀಪದ 80ವರ್ಷದ ಮಹಿಳೆ,ಸುಣ್ಣದ ಬೀದಿಯ ಮಸೀದಿ ಸಮೀಪದ 52 ವರ್ಷದ ಪುರುಷ,ನೆಹರೂ ನಗರದ ಅಂಗನವಾಡಿ ಸಮೀಪದ 37 ವರ್ಷದ ಪುರುಷ,ಸೋಮವಾರಪೇಟೆ ಕರ್ಕಳ್ಳಿ ಗ್ರಾಮದ ಕಟ್ಟೆ ಬಸವೇಶ್ವರ ದೇವಾಲಯ ಸಮೀಪದ 68ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ವೀರಾಜಪೇಟೆ ಪೊನ್ನಪ್ಪ ಸಂತೆಯ ಈಶ್ವರ ದೇವಾಲಯ ರಸ್ತೆಯ 30 ವರ್ಷದ ಮಹಿಳೆ ಮತ್ತಿ 38ವರ್ಷದ ಪುರುಷ,ಗೋಣಿಕೊಪ್ಪ ಬೈಪಾಸ್ ರಸ್ತೆಯ 33 ವರ್ಷದ ಪುರುಷ,ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿಯ 31ವರ್ಷದ ಪುರುಷ,ರಾಧಾಕೃಷ್ಣ ಲೇಔಟಿನ 4ನೇ ಬ್ಲಾಕಿನ 43ವರ್ಷದ ಪುರುಷ,ಗೊಂದಿಬಸವನಹಳ್ಳಿಯ 24 ವರ್ಷದ ಮಹಿಳೆ,ಕರಿಯಪ್ಪ ಬಡಾವಣೆಯ 65ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಬೆಟ್ಟಗೇರಿ ಟೌನಿನ ಏರ್ಟೆಲ್ ಟವರ್ ಸಮೀಪದ 42 ವರ್ಷದ ಪುರುಷ,ಭಾಗಮಂಡಲ ಅಯ್ಯಂಗೇರಿ ಟೌನಿನ 55 ವರ್ಷದ ಪುರುಷ,ಸುಂಟಿಕೊಪ್ಪ 7ನೇ ಹೊಸಕೋಟೆಯ 1ನೇ ಬ್ಲಾಕ್ ನ ಯೂನಿಯನ್ ಬ್ಯಾಂಕ್ ಸಮೀಪದ 33 ವರ್ಷದ ಪುರುಷ,ಭಾಗಮಂಡಲ ಬಿಸಿಎಂ ಹಾಸ್ಟೆಲ್ ನ 32 ವರ್ಷದ ಪುರುಷ,ವೀರಾಜಪೇಟೆ ಸಿದ್ದಾಪುರದ ಅಂಬೇಡ್ಕರ್ ನಗರದ 70ವರ್ಷದ ಮಹಿಳೆ ಮತ್ತು 13ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಶಾಲನಗರ ನಾಗೇಗೌಡ ಬಡಾವಣೆಯ 19 ವರ್ಷದ ಪುರುಷ,ಮಡಿಕೇರಿ ಕನ್ನಂಡಬಾಣೆಯ 47 ವರ್ಷದ ಪುರುಷ,ಕರ್ಣಂಗೇರಿ ಕಾರಾಗೃಹ ವಸತಿಗೃಹದ 27 ವರ್ಷದ ಪುರುಷ,ಮಡಿಕೇರಿ ಹೊಸ ಬಡಾವಣೆ ಸಮೀಪದ 34 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿದೆ.
ಮಡಿಕೇರಿ ಹೆಬ್ಬೆಟ್ಟಗೇರಿ ಗ್ರಾಮದ ಗಾಳಿಬೀಡು ರಸ್ತೆಯ 72 ವರ್ಷದ ಪುರುಷ,ಗೋಣಿಕೊಪ್ಪ ಅರವತ್ತೊಕ್ಲುವಿನ ಜೋಡುಪಟ್ಟಿ ಅಂಬೇಡ್ಕರ್ ಭವನ ಸಮೀಪದ 60 ವರ್ಷದ ಮಹಿಳೆ,ಮಡಿಕೇರಿ ಹೊದವಾಡದ ಕೊಟ್ಟಮುಡಿ ಗ್ರಾಮದ ಸರ್ಕಾರಿ ಶಾಲೆ ಸಮೀಪದ 27ವರ್ಷದ ಮಹಿಳೆ,ಸೋಮವಾರಪೇಟೆ ಎಂಡಿ ಬ್ಲಾಕ್ ನ 45 ವರ್ಷದ ಪುರುಷ,ಕುಶಾಲನಗರ ಬಸವೇಶ್ವರ ಬಡಾವಣೆಯ 29 ವರ್ಷದ ಪುರುಷ,ಮಡಿಕೇರಿ ಚೈನ್ ಗೇಟ್ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ 85 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2176 ಆಗಿದ್ದು,ಈ ಪೈಕಿ 1779 ಮಂದಿ ಗುಣಮುಖರಾಗಿದ್ದಾರೆ. 367 ಸಕ್ರಿಯ ಪ್ರಕರಣಗಳಿದ್ದು, 30 ಮಂದಿ ಸಾವಿಗೀಡಾಗಿದ್ದಾರೆ.ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 323 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.