ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜನಮೈತ್ರಿ ಪೊಲೀಸ್ ಸಹಕಾರದೊಂದಿಗೆ ಟ್ರೂ ಲೈಫ್ ಕೇರ್ ಕಾಸರಗೋಡು ಇವರ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ವೈದ್ಯಕೀಯ ಶಿಬಿರವನ್ನು ನಡೆಸಲಾಯಿತು.
ಡಾ. ಅನೂಪ್ ವಾರ್ಯರ್ ಆಶ್ರಮವಾಸಿಗಳ ತಪಾಸಣೆಯನ್ನು ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕ್ರೈಂ ದಾಖಲಾತಿ ಬ್ಯೂರೋ ಪ್ರಧಾನ ಅಧಿಕಾರಿ ಲತೀಶ್, ಎಎಸ್ಐ ಮುಹಮ್ಮದ್ ಶಾಫಿ, ಜನಮೈತ್ರಿ ಪೊಲೀಸ್ ವಿಭಾಗದ ಅನೂಪ್, ಮಹೇಶ್, ಟ್ರೂ ಲೈಫ್ ಕೇರ್ ಕೋಓರ್ಡಿನೇಟರ್ ಅಸ್ಕರ್ ಕೀಯೂರ್, ಅಫೀಫ್, ಆಶ್ರಮದ ಟ್ರಸ್ಟಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಕೃಷ್ಣ ಪಾಲ್ಗೊಂಡಿದ್ದರು.
ಕೊರೋನಾ ಕಾಲಘಟ್ಟದಲ್ಲಿ ಆಸ್ಪತ್ರೆಗೆ ತೆರಳಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ನಿಜವಾಗಿಯೂ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಆರೋಗ್ಯ ಇಲಾಖೆಯನ್ನು ಸಂಪರ್ಕಿಬೇಕು ಎಂಬ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ವಿವಿಧೆಡೆ ಹಮ್ಮಿಕೊಳ್ಳಲಾಗುವುದು ಎಂಬುದು ಜನಮೈತ್ರಿ ಪೊಲೀಸ್ ಹಾಗೂ ಟ್ರೂ ಲೈಫ್ ಕೇರ್ನ ಉದ್ದೇಶವಾಗಿದೆ.