ಮಂಗಳೂರು: ರಾಜ್ಯ ರಾಜಧಾನೀ ಬೆಂಗಳೂರಿನ ಡಿ ಜೆ ಹಳ್ಳಿ .ಗಲಭೆ ಪ್ರಕರಣದಲ್ಲಿ ಸಂಬಂಧ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ರಾಜ್ಗಾಗಿ ಸಿಸಿಬಿ ಪೊಲೀಸರು ಶೋಧ ಮುಂದುವರಿಸಿದ್ದು, ಸಿಸಿಬಿ ಅಧಿಕಾರಿಗಳು ಸಂಪತ್ರಾಜ್ನ ಸಂಬಂಧಿಗಳು ಹಾಗೂ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ಆಸ್ಪತ್ರೆಯ ಆರೇಳು ಮಂದಿ ವೈದ್ಯರನ್ನು ವಿಚಾರಣೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ವೈದ್ಯರು ಮತ್ತು ಬಂಧುಗಳನ್ನು ಸುಮಾರು 5 ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ.
ಸಂಪತ್ರಾಜ್ ಈಗಾಗಲೇ ಪರಾರಿಯಾಗಿದ್ದು, ಆತನ ಶೋಧದಲ್ಲಿ ಸಿಸಿಬಿ ಪೊಲೀಸರು ನಿರತರಾಗಿದ್ದಾರೆ. ಸಂಪತ್ರಾಜ್ ಡಿಸ್ಚಾರ್ಜ್ ಆಗುವಾಗ ಯಾಕೆ ಸಿಸಿಬಿಗೆ ಮಾಹಿತಿ ನೀಡಿಲ್ಲ ಹಾಗೂ ಆತನಿಗೆ ಯಾವೆಲ್ಲ ಚಿಕಿತ್ಸೆ ನೀಡಲಾಗಿದೆ? ಮುಂತಾದ ಸಾಕಷ್ಟು ಪ್ರಶ್ನೆಗಳನ್ನು ವೈದ್ಯರಿಗೆ ಕೇಳಲಾಗಿದೆ. ವೈದ್ಯರ ಹೇಳಿಕೆಗಳು ಗೊಂದಲಮಯವಾಗಿದ್ದು, ಹೀಗಾಗಿ ಅಗತ್ಯವಿದ್ದರೆ ಮತ್ತೂಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಹೇಳಿ ಕಳುಹಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.