ಹೊಸದಿಗಂತ ವರದಿ,ಮೈಸೂರು:
ಪೋಷಕರು ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನೇತಾಜಿನಗರದ ನಿವಾಸಿ ನಾರಾಯಣ್ ಎಂಬವರ ಪುತ್ರಿ ಭಾವನ (23) ಆತ್ಮಹತ್ಯೆ ಮಾಡಿಕೊಂಡಾಕೆ. ಪೋಷಕರು ಅಕ್ಕನಿಗೆ ಒಡವೆ, ಬಟ್ಟೆ ಏನೇ ಕೊಡಿಸಬೇಕು ಎಂದರು ಆಕೆಯನ್ನು ಕೇಳಿ, ಅವಳನ್ನೂ ಕರೆದುಕೊಂಡು ಹೋಗಿ ಕೊಡಿಸುತ್ತಾರೆ.
ಆದರೆ, ನನಗೆ ಏನು ಬೇಕು, ಯಾವ ತರದ ಒಡವೆ ಬೇಕು, ಬಟ್ಟೆ ಬೇಕು ಎಂಬುವುದನ್ನೇ ಕೇಳುವುದಿಲ್ಲ. ಅವರು ತಂದುಕೊಟ್ಟದನ್ನು ಹಾಕಿಕೊಳ್ಳಬೇಕು ಎಂಬ ಬೇಸರದಿಂದ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.