ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಹಾದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ನೀವು ತಿದ್ದಿಕೊಳ್ಳದಿದ್ದರೆ ನಿಮಗೆ ಚಟ್ಟ ಕಟ್ಟುವುದು ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಲವ್ ಜಿಹಾದ್ ವಿರುದ್ಧ ಗುಡುಗಿದ್ದಾರೆ. ‘ ಮದುವೆ ಆಗಲು ಮತಾಂತರ ಆಗಬೇಕಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಅದಾಗ್ಯೂ ಗುರುತು ಮರೆಮಾಚಿ ಹಿಂದೂ ಸೋದರಿಯರ ಜೀವನದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಹೀಗಾಗಿ ಲವ್ ಜಿಹಾದ್ ವಿರುದ್ಧ ಸರ್ಕಾರ ಕಠಿಣವಾದ ಕಾನೂನೊಂದನ್ನು ಮಾಡಲಿದೆ. ಲವ್ ಜಿಹಾದ್ ನಡೆಸುವವರು ತಿದ್ದಿಕೊಳ್ಳದಿದ್ದರೆ ಅವರ ರಾಮ್ ನಾಮ್ ಸತ್ಯ ಯಾತ್ರೆ (ಅಂತಿಮಯಾತ್ರೆ) ಶುರುವಾಗುತ್ತದೆ ಎಂದು ಸಿಎಂ ಯೋಗಿ ಎಚ್ಚರಿಕೆ ನೀಡಿದ್ದಾರೆ.