ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೋಘ ಆಟವಾಡಿದ ಭಾರತದ ಕಿದಂಬಿ ಶ್ರೀಕಾಂತ್ ಬುಧವಾರ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಮತ್ತೊಂದು ಪಂದ್ಯದಲ್ಲಿ ಮೀನಖಂಡದ ಸೆಳೆತ ಅನುಭವಿಸಿದ ಪರುಪಳ್ಳಿ ಕಶ್ಯಪ್ ಪಂದ್ಯದ ಅರ್ಧದಲ್ಲೇ ನಿವೃತ್ತರಾದರು.
ಶ್ರೀಕಾಂತ್ ಮೊದಲ ಸುತ್ತಿನ ಹಣಾಹಣಿಯಲ್ಲಿ 21-12, 21-11ರಿಂದ ಭಾರತದವರೇ ಆದ ಸೌರಭ್ ವರ್ಮಾ ಅವರ ಸವಾಲು ಮೀರಿದರು. ಸೌರಭ್ ಎದುರು ಗೆಲ್ಲಲು ಶ್ರೀಕಾಂತ್ ಅವರಿಗೆ ಕೇವಲ 31 ನಿಮಿಷಗಳು ಬೇಕಾದವು.
ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾದ ಜೇಸನ್ ಅಂಥೋನಿ ಹೊ ಶುಯ್ ಎದುರು ಕಣಕ್ಕಿಳಿದಿದ್ದ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್, ಮೂರನೇ ಗೇಮ್ನಲ್ಲಿ 8-14ರಿಂದ ಹಿಂದಿದ್ದರು. ಈ ವೇಳೆ ಅವರಿಗೆ ಮೀನಖಂಡದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿವೃತ್ತರಾಗಬೇಕಾಯಿತು. ಮೊದಲ ಗೇಮ್ಅನ್ನು 9-21ರಿಂದ ಕೈಚೆಲ್ಲಿದ್ದ ಕಶ್ಯಪ್, ಎರಡನೇ ಗೇಮ್ನಲ್ಲಿ 21-13ರಿಂದ ಗೆದ್ದು ಸಮಬಲ ಸಾಧಿಸಿದ್ದರು.
ಸಾತ್ವಿಕ್ಸಾಯಿರಾಜ್-ಚಿರಾಗ್ಗೆ ಗೆಲುವು
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಯು 19-21, 21-16, 21-14ರಿಂದ ದಕ್ಷಿಣ ಕೊರಿಯಾದ ಕಿಮ್ ಗಿ ಜಂಗ್-ಲೀ ಯೊಂಗ್ ಡೇ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.