ಮಂಗಳೂರು: ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಬಾಗಲಕೋಟೆಯ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಕಳ್ಳತನ ಎಸಗಿದ್ದು, ವಸ್ತು ಹಾಗೂ ಹಣ ದೋಚಿದ್ದಾರೆ.
ಉಮಾಶ್ರೀ ಅವರ ಮನೆ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ವಸ್ತು ಹಣ ಕದ್ದಿದ್ದು, ಸ್ಥಳಕ್ಕೆ ಸಿಪಿಐ ಕರುಣೇಸೀಗೌಡ ಮತ್ತು ಪಿಎಸ್ಐ ವಿಜಯ್ಕುಮಾರ್ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.