ಬೆಂಗಳೂರು: ಲಾಕ್ ಡೌನ್, ಉದ್ಯೋಗ ನಷ್ಟದಿಂದಾಗಿ ದೇಶದ ಜನ ತತ್ತರಿಸುತ್ತಿದ್ದಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಪೆಟ್ರೋಲ್ ಬೆಲೆ ಏರಿಸಿ ಜನರ ಜೇಬಿಗೆ ಕೊಳ್ಳಿ ಇಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸುತ್ತಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಲಾಕ್ ಡೌನ್, ಉದ್ಯೋಗ ನಷ್ಟದಿಂದಾಗಿ ದೇಶದ ಜನ ತತ್ತರಿಸಿದ್ದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜೂನ್ ನಲ್ಲಿ ನಿರಂತರ 23 ಬಾರಿ, ಜುಲೈ ನಲ್ಲಿ 9 ಬಾರಿ, ಈಗ ಅಗಸ್ಟ್ ತಿಂಗಳಲ್ಲಿ 12 ಬಾರಿ ಕಚ್ಚಾ ತೈಲ ಬೆಲೆ ಇಳಿಕೆ ಆಗುತ್ತಿದ್ದರೂ ಪೆಟ್ರೋಲ್ ಬೆಲೆ ಏರಿಸಿ ಜನರ ಜೇಬಿಗೆ ಕೊಳ್ಳಿ ಇಡುತ್ತಿದೆ ಎಂದು ಆರೋಪಿಸಿದೆ.
ಕೊರೊನಾ ಭಾರತಕ್ಕೆ ಕಾಲಿಡುವುದಕ್ಕೂ ಮುಂಚೆಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಗ್ಗೆ ಹಣಕಾಸು ಸಚಿವರು ಏನು ಹೇಳುತ್ತಾರೆ? ಜಿಎಸ್ಟಿ ವಿಷಯದಲ್ಲಿಯೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯಗಳಿಗೆ ಅನ್ಯಾಯ ಮಾಡಿ ಜವಾಬ್ದಾರಿಯಿಂದ ನುಣಚಿಕೊಳ್ಳಲು ಯತ್ನಿಸುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.
ಲಾಕ್ ಡೌನ್, ಉದ್ಯೋಗ ನಷ್ಟದಿಂದಾಗಿ ದೇಶದ ಜನ ತತ್ತರಿಸಿದ್ದರೆ @narendramodi ನೇತೃತ್ವದ ಕೇಂದ್ರ ಸರ್ಕಾರ,
▶ಜೂನ್ ನಲ್ಲಿ ನಿರಂತರ 23 ಬಾರಿ
▶ಜುಲೈ ನಲ್ಲಿ 9 ಬಾರಿ
▶ಈಗ ಅಗಸ್ಟ್ ತಿಂಗಳಲ್ಲಿ 12 ಬಾರಿ
ಕಚ್ಚಾ ತೈಲ ಬೆಲೆ ಇಳಿಕೆ ಆಗುತ್ತಿದ್ದರೂ ಪೆಟ್ರೋಲ್ ಬೆಲೆ ಏರಿಸಿ ಜನರ ಜೇಬಿಗೆ ಕೊಳ್ಳಿ ಇಡುತ್ತಿದೆ.https://t.co/4cmRMdzM8J
— Karnataka Congress (@INCKarnataka) August 30, 2020
ಕೊರೊನಾ ಭಾರತಕ್ಕೆ ಕಾಲಿಡುವುದಕ್ಕೂ ಮುಂಚೆಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಗ್ಗೆ ಹಣಕಾಸು ಸಚಿವರು ಏನು ಹೇಳುತ್ತಾರೆ?
ಜಿಎಸ್ಟಿ ವಿಷಯದಲ್ಲಿಯೂ ಕೇಂದ್ರದ @narendramodi ಸರ್ಕಾರ ರಾಜ್ಯಗಳಿಗೆ ಅನ್ಯಾಯ ಮಾಡಿ ಜವಾಬ್ದಾರಿಯಿಂದ ನುಣಚಿಕೊಳ್ಳಲು ಯತ್ನಿಸುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ.
– @PChidambaram_IN pic.twitter.com/4tmi3Yiptf— Karnataka Congress (@INCKarnataka) August 30, 2020