ಕೊಲ್ಕತಾ: ಪಶ್ಚಿಮ ಬಂಗಾಳದ ಪಾರ್ಗಣ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಮನೀಷ್ ಶುಕ್ಲಾ ಅವರ ಮೇಲೆ ದಾಳಿ ನಡೆಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಖಂಡಿಸಿದ ರಾಜ್ಯ ಬಿಜೆಪಿ ಬಂಗಾಳದ ಬಾರಖ್ ಪುರದಲ್ಲಿ 12 ಗಂಟೆಗಳ ಬಂದ್ ಮಾಡುಲಾಗುವುದು.
ತಿತಾಘರ್ ಪೊಲೀಸ್ ಠಾಣೆಯ ಎದುರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡು ಹಾರಿಸಿದ್ದು, ಆಸ್ಪತ್ರೆಗೆ ಸ್ಥಳಾಂತರಿಸುವ ಮಾರ್ಗ ಮಧ್ಯೆ ಮನೀಷ್ ಶುಕ್ಲಾ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು, ಟಿತಾಘರ್ ನಲ್ಲಿ ಶಸ್ತ್ರಾಸ್ತ್ರಗಳಿಂದ ಬಿಜೆಪಿ ನಾಯಕನ ಹತ್ಯೆಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದ ಅವಧಿಯಲ್ಲಿ 110ಕ್ಕೂ ಹೆಚ್ಚು ರಾಜ್ಯ ಬಿಜೆಪಿ ನಾಯಕರ ಹತ್ಯೆಯಾಗಿದೆ ಎಂದು ಗುಡುಗಿದ್ದಾರೆ.
Sri Manish Shukla , Councillor from Titagarh shot dead by miscreants carrying arms . More than 110 workers of @BJP4Bengal murdered under @MamataOfficial rule . Party stands with the family & friends at this time of grief . pic.twitter.com/ahq9qvVk6s
— B L Santhosh (@blsanthosh) October 5, 2020