ಬೆಳ್ತಂಗಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಸೋಮವಾರವೂ ಮುಂದುವರಿದಿದ್ದು, ಮಿತ್ತಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಸಂಜೆ ಭೂ ಕುಸಿತ ಉಂಟಾಗಿದ್ದು, ಸುಮಾರು 6 ಎಕ್ರೆ ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿದೆ.
ಈ ಪ್ರದೇಶವು ಕುದುರೇಮುಖ ರಾಷ್ಟ್ರೀಯ ಉಧ್ಯಾನವನದ ಒಳಗೆ ಇದ್ದು ಮೀಸಲು ಅರಣ್ಯ ಪ್ರದೇಶವಾಗಿದೆ.
ಜನ ವಸತಿ ಪ್ರದೇಶದಿಂದ ಸುಮಾರು ಮೂರು ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿ ಕುಸಿತವಾಗಿದೆ. ಸಣ್ಣ ಗುಡ್ಡವೊಂದರ ಒಂದು ಬದಿ ಕುಸಿದು ಜಾರಿದೆ. ಸುಮಾರು ಎರಡು ಎಕ್ರೆಗೂ ಅಕ ಪ್ರದೇಶದಲ್ಲಿ ಮಣ್ಣು ಜಾರಿದ್ದು ಮರಗಳು ನೆಲಕ್ಕುರುಳಿವೆ. ಕುಸಿದಿರುವ ಮಣ್ಣು ಮರಮಟ್ಟುಗಳೊಂದಿಗೆ ಒಂದಿಷ್ಟು ಜಾರಿ ಕಾಡಿನ ನಡುವೆಯೇ ಸಿಲುಕಿಕೊಡಿದೆ. ಸಮೀಪದ ತೋಡಿನಲ್ಲಿ ಕೆಸರು ನೀರು ಬರುವುದನ್ನು ನೋಡಿ ಗುಡ್ಡದ ಮೇಲೆ ಭೂಕುಸಿತದ ಸಾಧ್ಯತೆಯಿರುವ ಅನುಮಾನದಿಂದ ಗ್ರಾಮಸ್ಥರು ಹುಡುಕಿದಾಗ ಭೂ ಕುಸಿತವಾಗಿರುವುದು ಕಂಡು ಬಂದಿದೆ. ತಾಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ.
ಈಗ ಸಂಭವಿಸಿರುವ ಕುಸಿತದಿಂದ ಯಾವುದೇ ಹೆಚ್ಚಿನ ಅಪಾಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದು ಮಳೆ ಮುಂದುವರಿದರೆ ಅಪಾಯವಾಗುವ ಸಾಧ್ಯತೆಯಿದೆ.