ಕಲಬುರಗಿ: ವಿವಿಧ ರಾಜ್ಯ ಹಾಗೂ ಜಿಲ್ಲೆಗಳಲ್ಲಿರುವ ವಲಸೆ ಕಾರ್ಮಿಕರನ್ನು ರಾಜ್ಯ ಸರ್ಕಾರ ತಮ್ಮ ಸ್ವಗ್ರಾಮಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದೆ.
ಇಂದು ಬೆಳಗ್ಗೆ ಮುಂಬೈ ನಿಂದ 2:20ರ ವೇಳೆಗೆ ಶ್ರಮಿಕ್ ವಿಶೇಷ ರೈಲು ಕಲಬುರಗಿಗೆ ಬಂದಿಳಿದಿದ್ದು, 1,230 ವಲಸೆ ಕಾರ್ಮಿಕರು ಮುಂಬೈ ನಿಂದ ರಾಜ್ಯಕ್ಕೆ ಬಂದಿದ್ದಾರೆ. ಕಲಬುರಗಿಗೆ ಬಂದಿರುವ ಎಲ್ಲಾ ಕಾರ್ಮಿಕರಿಗೂ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
Karnataka: A 'shramik special train' carrying 1230 migrant workers from Mumbai arrived at Kalaburagi Railway station at 2.20 am, today. pic.twitter.com/yxFzzq9aj6
— ANI (@ANI) May 12, 2020