ಚಿತ್ರದುರ್ಗ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಾಳೆ ಜರುಗಲಿರುವ ರಾಮಮಂದಿರ ಭೂಮಿಪೂಜೆ ಹಾಗೂ ಶಿಲಾನ್ಯಾಸ ಸಮಾರಂಭಕ್ಕೆ ಪಾಲ್ಗೊಳ್ಳಲಿರುವ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ವತಿಯಿಂದ ಕಳಿಸಿಕೊಡಲಾಯಿತು.
ನಗರದ ಆನೆ ಬಾಗಿಲು ಸಮೀಪವಿರುವ ಶ್ರೀರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಸವಮೂರ್ತಿ ಮಾಚಾರ ಚೆನ್ನಯ್ಯ ಅವರನ್ನು ಬೀಳ್ಕೊಡಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ಬಾಬು (ಸೈಟ್ಬಾಬಣ್ಣ) ರಾಮಮಂದಿರ ಭೂಮಿಪೂಜೆ ಹಾಗೂ ಶಿಲಾನ್ಯಾಸಕ್ಕೆ ತೆರಳುತ್ತಿರುವ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ವಿಮಾನದ ಟಿಕೇಟ್ ನೀಡುವ ಮೂಲಕ ಪ್ರಯಾಣ ಸುಖಕರವಾಗಿರಲೆಂದು ಹಾರೈಸಿದರು.
ಆನೆ ಬಾಗಿಲು ಸಮೀಪವಿರುವ ಮೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಂಗಳವಾರ ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ ಅಯೋಧ್ಯೆಗೆ ತೆರಳಿದರು. ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಶ್ರೀನಿವಾಸ್, ಭದ್ರಿನಾಥ್, ಪ್ರಭಂಜನ್, ತಿಪ್ಪೇಸ್ವಾಮಿ, ವಿಠಲ್, ಓಂಕಾರ್, ಭಾನುಮೂರ್ತಿ, ರುದ್ರೇಶ್, ಅಶೋಕ್, ಶ್ಯಾಮಲಾ ಶಿವಪ್ರಕಾಶ್, ಭಾರ್ಗವಿ ದ್ರಾವಿಡ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.