ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಶಾಂತ್ ಜೊತೆ ಆಪ್ತವಾಗಿದ್ದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರ ಸ್ನೇಹಿತ ಸಿದ್ಧಾರ್ಥ್ ಪಿಟಾನಿ ಕೂಡ ಕಳೆದ ೫ ದಿನಗಳಿಂದ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಈ ವೇಳೆ ಅವರೊಂದು ಶಾಕಿಂಗ್ ಸತ್ಯ ಬಾಯಿ ಬಿಟ್ಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಜೊತೆ ವಾಸಿಸುತ್ತಿದ್ದ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಜೂ.೮ರಂದು ಜಗಳ ಮಾಡಿಕೊಂಡು ಅಪಾರ್ಟ್ಮೆಂಟ್ನಿಂದ ಹೊರಬಂದರು ಎಂಬ ವಿಷಯ ಈಗಾಗಲೇ ಬಹಿರಂಗ ಆಗಿತ್ತು. ಲೇಟೆಸ್ಟ್ ಮಾಹಿತಿ ಏನೆಂದರೆ, ಸುಶಾಂತ್ರ ಫ್ಲಾಟ್ ಬಿಟ್ಟುಬರುವುದಕ್ಕೂ ಮುನ್ನ ೮ ಹಾರ್ಡ್ ಡಿಸ್ಕ್ಗಳನ್ನು ರಿಯಾ ನಾಶ ಪಡಿಸಿದ್ದರು ಎಂದು ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಪಿಟಾನಿ ಹೇಳಿದ್ದಾರೆ.
ಹಾಗಾದರೆ ಆ ಹಾರ್ಡ್ ಡಿಸ್ಕ್ಗಳಲ್ಲಿ ಏನಿತ್ತು ಎಂಬ ಬಗ್ಗೆ ಈಗ ಅನುಮಾನ ಮೂಡಿದೆ. ಕೆಲವು ಐಟಿ ತಜ್ಞರನ್ನು ಕರೆಸಿ, ಹಾರ್ಡ್ ಡಿಸ್ಕ್ನಲ್ಲಿ ಇದ್ದ ಮಾಹಿತಿಯನ್ನು ತಮಗೆ ಬೇಕಾದ ಕಡೆಗೆ ಕಾಪಿ ಮಾಡಿಸಿಕೊಂಡು, ನಂತರ ಅದನ್ನು ನಾಶಪಡಿಸಲಾಗಿದೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸುಶಾಂತ್ ತಂದೆ ಕೆ.ಕೆ. ಸಿಂಗ್ ಪರ ವಕೀಲರಾದ ವಿಕಾಸ್ ಸಿಂಗ್ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದೊಂದು ದಿನ ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ‘ಯದಿಂದಲೇ ರಿಯಾ ಈ ರೀತಿ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ಹಾರ್ಡ್ ಡಿಸ್ಕ್ ನಾಶಪಡಿಸಿದ ಸಂದ‘ರ್ದಲ್ಲಿ ಸುಶಾಂತ್ ಕೂಡ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಜೊತೆಗೆ ಮನೆ ಕೆಲಸದ ವ್ಯಕ್ತಿ ದಿನೇಶ್ ಸಾವಂತ್, ಅಡುಗೆ ಕೆಲಸದ ನೀರಜ್ ಕೂಡ ಈ ಘಟನೆಗೆ ಸಾಕ್ಷಿ ಆಗಿದ್ದರಂತೆ. ಆದರೆ ಆ ಹಾರ್ಡ್ ಡಿಸ್ಕ್ನಲ್ಲಿ ಏನಿತ್ತು ಎಂಬುದನ್ನು ಯಾರೂ ಹೇಳಿಕೊಂಡಿಲ್ಲ. ’ಈ ಎಲ್ಲ ಘಟನೆಗಳನ್ನು ಗಮನಿಸಿದರೆ ದೊಡ್ಡ ಸಂಚು ನಡೆದಿದೆ ಎಂಬ ಅನುಮಾನ ಮೂಡುತ್ತಿದೆ’ ಎಂದಿದ್ದಾರೆ ಸುಶಾಂತ್ ತಂದೆ ಪರ ವಕೀಲರಾದ ವಿಕಾಸ್ ಸಿಂಗ್.