ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಆರು ಗಂಟೆಗಳ ಕಾಲ ಐಎಸ್ಡಿ ವಿಚಾರಣೆ ಮುಗಿಸಿ ಗಟ್ಟಿಮೇಳ ಧಾರಾವಾಹಿಯ ಕಿರುತೆರೆ ನಟ ಅಭಿಷೇಕ್ ಹೊರ ಬಂದಿದ್ದಾರೆ.
ವಿಚಾರಣೆ ಬಳಿಕ ಅಭಿಷೇಕ್ ದಾಸ್ ಮಾಧ್ಯಮ ಜೊತೆ ಮಾತಾಡಿ, ಡ್ರಗ್ಸ್ ಮಾಫಿಯಾದ ಅನುಮಾನವಿರುವ ವ್ಯಕ್ತಿಗಳು ನಮಗೆ ಪರಿಚಯವಿದ್ದರಾ ಎಂದು ತಿಳಿಯಲು ಕರೆಸಿದ್ದರು. ಐಎಸ್ಡಿ ಬಂಧಿಸಿರುವವರೊಂದಿಗೆ ನಮಗೆ ಸಂಪರ್ಕ ಇದೆಯಾ? ಯಾವುದಾದ್ರೂ ಪಾರ್ಟಿಗಳಲ್ಲಿ ಪರಿಚಯವಾಗಿದ್ರಾ? ನನ್ನ ಫೋನ್ನಿಂದ ಕರೆಗಳು ಹೋಗಿದೆಯಾ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ . 1 ತಿಂಗಳ ಫೋನ್ ಕರೆ ವಿವರ ಪರಿಶೀಲಿಸಿದ್ದಾರೆ . ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ, ನನಗೆ ಗೊತ್ತಿರುವ ಮಾಹಿತಿಯನ್ನ ಅವರಿಗೆ ಹೇಳಿದ್ದೇನೆ . ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಬರಲಿದ್ದೇನೆ.