ಹೊಸದಿಗಂತ ಆನ್ಲೈನ್ ಡೆಸ್ಕ್:
ರೈಲು ಬರುತ್ತಿದೆ ಎಂದರೆ ಯಾರೇ ಆದರೂ ನಿಂತು ಅದಕ್ಕೆ ದಾರಿ ಮಾಡಿಕೊಡಲೇ ಬೇಕು, ಆದರೆ ಇಲ್ಲಿ ತನ್ನ ಹಳಿದಾಟುವವರಿಗಾಗಿ ರೈಲೇ ನಿಂತು ದಾರಿ ಮಾಡಿಕೊಟ್ಟ ಘಟನೆ ನಡೆದಿದೆ. ಅಷ್ಟೇ ಅಲ್ಲ ಈ ಘಟನೆಗೆ ಕೇಂದ್ರ ರೈಲ್ವೇ ಸಚಿವ ಪೀಯೂಷ್ ಗೋಯಲ್ ಅವರೇ ಭೇಷ್ ಅಂದಿದ್ದಾರೆ!
ಇದು ನಡೆದದ್ದು ಪಶ್ಚಿಮ ಬಂಗಾಳದ ಸಿವೊಕ್ ಹಾಗೂ ಗುಲ್ಮಾ ಮಾರ್ಗದಲ್ಲಿ. ತಡರಾತ್ರಿ ಸಂಚರಿಸುತ್ತಿದ್ದ ರೈಲಿನ ಪೈಲೆಟ್ಗೆ ಹಳಿಯಲ್ಲಿ ಆಹಾರ ಅರಸಿ ಸಾಗುತ್ತಿದ್ದ ಮೂರು ಆನೆಗಳು ಕಂಡಿವೆ. ತಕ್ಷಣವೇ ನಿಯಂತ್ರಣ ಸಾಧಿಸಿ ರೈಲನ್ನು ನಿಲ್ಲಿಸಲಾಗಿದ್ದು, ಆನೆಗಳು ಹಳಿಯಿಂದ ದೂರ ಸರಿದ ಬಳಿಕ ರೈಲು ಮತ್ತೆ ತನ್ನ ಪ್ರಯಾಣ ಮುಂದುವರಿಸಿದೆ. ಈ ನಡುವೆ ಈ ಎಲ್ಲಾ ಬೆಳವಣಿಗೆಗಳನ್ನು ಯಾರೋ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದನ್ನು ಗಮನಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್, ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಷ್ಟೇ ಅಲ್ಲದೆ ರೈಲ್ವೆ ಪೈಲೆಟ್ ಹಾಗೂ ಸಿಬ್ಬಂದಿ ಸೂಕ್ತ ನಿರ್ಧಾರದಿಂದಾಗಿ ಮೂರು ಆನೆಗಳ ಜೀವ ಉಳಿದಿದೆ ಎಂದು ಬರೆದು ಮೆಚ್ಚುಗೆ ಸೂಚಿಸಿದ್ದಾರೆ.
The alertness & prompt action of loco pilot & crew helped to save lives of three elephants ? including one baby elephant crossing rail tracks on Sivok-Gulma section in West Bengal.
The train stopped immediately, waiting for the elephants to safely cross over to the other side. pic.twitter.com/tYTgkydkJb
— Piyush Goyal (@PiyushGoyal) November 11, 2020