ಹೊಸದಿಗಂತ ವರದಿ, ಬೆಳಗಾವಿ:
ಹೆಚ್.ವಿಶ್ವನಾಥ್ ವಿಚಾರವಾಗಿ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಸುಪ್ರೀಂ ಕೋರ್ಟ್ ಅನರ್ಹರಿಗೆ ನೀಡಿದ ಆದೇಶ ನಮ್ಮ ಬಳಿ ಇದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್ ವಿಫ್ ಉಲ್ಲಂಘನೆ ಪ್ರಶ್ನೆ ಬರಲ್ಲ. ನಾವು ಎಲ್ಲಿಯಾದರೂ ಹೋಗಬಹುದು ಎಂದು ಆದೇಶ ನೀಡಿದೆ. ಇದೆ ಆದೇಶ ಇಟ್ಟುಕೊಂಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೆವೆ ಎಂದರು.
ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿಯೇ ಹೋಗಬೇಕಿತ್ತು ಆದರೆ ಸಮಯ ಸಿಕ್ಕಿರಲಿಲ್ಲಾ.
ಹೆಚ್.ವಿಶ್ವನಾಥ್ ಅವರಿಗೆ ಒಳ್ಳೆಯದು ಆಗಲಿದೆ. ವಿಶ್ವನಾಥ್ ಜೋತೆಗೆ ನಾವು ಇದ್ದೇವೆ ನಾವು 17 ಜನರು ಒಗ್ಗಟ್ಟಾಗಿದ್ದೇವೆ ಎಂದರು.
ಸಿಎಂ ಯಡಿಯೂರಪ್ಪ ಬದಲಾವಣೆ ಪ್ರಶ್ನೆಯು ಇಲ್ಲ. ನಾವು ಯಡಿಯೂರಪ್ಪ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲೆ ಮುಂದಿನ ಚುನಾವಣೆಗೆ ಹೋಗುತ್ತೆವೆ ಎಂದರು.
ಸಿಪಿ ಯೋಗಿಶ್ವರ ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ನಾವು ಆ ಕುರಿತು ಮಾತನಾಡಲ್ಲಾ ಇದು ಸಿಎಂ ಯಡಿಯೂರಪ್ಪ ಅವರ ಪರಮಾಧಿಕಾರ ಯಡಿಯೂರಪ್ಪ ಅವರ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.