ಮಾಗಡಿ: ಹೋಂ ಕ್ವಾರಂಟೈನ್ ನಲ್ಲಿ ಇರುವವರು ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಮಾಡುವವರ ವಿರುದ್ಧ ಕೇಸ್ ದಾಖಲಿಸಲಾಗುವುದೆಂದು ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವೊಂದು ಕಡೆ ನಿಯಮ ಉಲ್ಲಂಘನೆ ಆಗುತ್ತಲೇ ಇದೆ. ಇದಕ್ಕ ಸಂಬಂಧಿಸಿದಂತೆ ಇಂಥದ್ದೇ ಘಟನೆಯೊಂದು ಮಾಗಡಿ ಬಳಿ ನಡೆದಿದೆ
ಹೋಂ ಕ್ವಾರಂಟೈನಲ್ಲಿ ಇದ್ದ 7ಜನರು ನಿಯಮ ಉಲ್ಲಂಘಿಸಿ ಅಲೆದಾಡುತ್ತಿದ್ದು, ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
7 ಜನರ ವಿರುದ್ಧ ಠಾಣಾಧಿಕಾರಿ ಎಚ್.ಸಿ. ಮಂಜುನಾಥ ಎಫ್ಐಆರ್ ದಾಖಲಿಸಿದ್ದಾರೆ. ಕಾನೂನು ಉಲ್ಲಂಘನೆ ಮಾಡುವುದು ಅಪರಾಧ. ಎಚ್ಚರಿಕೆ ನೀಡಿದ ನಂತರವೂ ಅಲೆದಾಡಿದರೆ, ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಪುರಸಭೆ ವ್ಯಾಪ್ತಿಯ ಕೊರೊನಾ ಇನ್ಸಿಡೆಂಟ್ ಕಮಾಂಡೋಗಳಾದ ಬಿ.ಎಂ.ಸುಷ್ಮಾ, ಪ್ರಶಾಂತ್ ಕುಮಾರ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣದ ದಾಖಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.