ಹೊಸದಿಗಂತ ವರದಿ, ವಿಜಯಪುರ:
ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆಯೊಬ್ಬಳು ಸ್ಥಳದಲ್ಲಿ ಸಾವಿಗೀಡಾದ ಘಟನೆ ನಗರದ ಇಂಡಿ ಬೈಪಾಸ್ ಬಳಿ ನಡೆದಿದೆ.
ಇಲ್ಲಿನ ಜ್ಯೋತಿ ನಗರ ನಿವಾಸಿ ಶಾಂತಾಬಾಯಿ ಪರಶುರಾಮ ಪವಾರ (60) ಮೃತಪಟ್ಟ ವೃದ್ಧೆ.
ವೃದ್ಧೆ ಶಾಂತಾಬಾಯಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ವೃದ್ಧೆ ಸ್ಥಳದಲ್ಲೇ ಅಸುನೀಗಿದ್ದು, ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.