ದಿನ ಭವಿಷ್ಯ | ಈ ರಾಶಿಯವರು ಇಂದು ಹಾಕಿಕೊಂಡ ಯೋಜನೆ ನಿರ್ವಿಘ್ನವಾಗಿ ನೆರವೇರಲಿದೆ

ಮೇಷ
ಮನೆ ಅಥವಾ ಕೆಲಸದ ಜಾಗದಲ್ಲಿ  ಬದಲಾವಣೆಗಳು ಉಂಟಾಗ ಬಹುದು. ಅದಕ್ಕೆ ಹೊಂದಿಕೊಳ್ಳಲು ನೀವು ಕಲಿಯಬೇಕು. ವೃಥಾ ವಿರೋಧ ಬೇಡ.

ವೃಷಭ
ಮನೆಯಲ್ಲಿ ಅಶಾಂತಿ. ಕೆಲವು ವಿಷಯಗಳು ಮನಸ್ಸು ಕೊರೆಯುತ್ತವೆ.  ಆದರೆ ಅದಕ್ಕೆ ಪರಿಹಾರ ನಿಮ್ಮಲ್ಲಿಲ್ಲ. ಇತರರ ಮೇಲೆ ನೀವು ಅವಲಂಬಿತರಾಗಿದ್ದೀರಿ

ಮಿಥುನ
ಪ್ರೀತಿಪಾತ್ರರಿಗೆ ಕೊಡುಗೆ ಇಂದೇ ಕೊಡಿ. ಮೆಚ್ಚುಗೆ ಗಳಿಸುವಿರಿ. ಮನೆ ಮತ್ತು ಕಚೇರಿಯಲ್ಲಿ ಉಲ್ಲಾಸಭರಿತ ವಾತಾವರಣ.

ಕಟಕ
ಆಪ್ತೇಷ್ಟರೊಂದಿಗೆ ಅಭಿಪ್ರಾಯಭೇದ, ಮಾತಿನ ಚಕಮಕಿ ಸಂಭವ. ನೀವು ತಾಳ್ಮೆಯಿಂದ ವ್ಯವಹರಿಸಬೇಕು. ಮಾತಿನಲ್ಲಿ ಹಿಡಿತವಿರಲಿ.

ಸಿಂಹ
ಬೆಳಗಿನಿಂದ ಸಂತೋಷದ ಮೂಡ್‌ನಲ್ಲಿ ಇರುವಿರಿ. ಆದರೆ ಅಪರಾಹ್ನದ ನಂತರ ಮೂಡ್ ಕೆಡಿಸುವ ಪರಿಸ್ಥಿತಿ ಉಂಟಾದೀತು. ಸೈರಣೆ ಕಳಕೊಳ್ಳದಿರಿ.

ಕನ್ಯಾ
ಇಂದಿಗೆ ಯಾವುದಾದರೂ ಯೋಜನೆ ಹಾಕಿಕೊಂಡಿದ್ದರೆ ಅದು ನಿರ್ವಿಘ್ನವಾಗಿ ನೆರವೇರಲಿದೆ. ಖರ್ಚು ಹೆಚ್ಚಬಹುದು. ಅದನ್ನು ತಪ್ಪಿಸುವಂತಿಲ್ಲ.

ತುಲಾ
ಸಡಗರದ ದಿನ. ಆಪ್ತ ರೊಂದಿಗೆ ಸೇರಿಕೊಂಡು ಸಂತೋಷ ಆಚರಿಸುವ ದಿನ. ಹೆಚ್ಚಿನ ಕಾರ್ಯ ದೊತ್ತಡ ಇಂದು ಕಾಡದು. ಬಹುತೇಕ ಆರಾಮವಾಗಿರುವಿರಿ.

ವೃಶ್ಚಿಕ
ವೃತ್ತಿಯಲ್ಲಿ ಉನ್ನತಿ. ಬಯಸುತ್ತಿದ್ದ ಬಡ್ತಿ ಅಥವಾ ವೇತನ ಹೆಚ್ಚಳ ಸಿಗಬಹುದು. ಮನೆಯಲ್ಲೂ ಹರ್ಷದ ಪರಿಸ್ಥಿತಿ. ಬಂಧುಗಳ ಭೇಟಿ ಸಂಭವ.

ಧನು
ಕಠಿಣ ಶ್ರಮ ಪಟ್ಟರಷ್ಟೇ ನಿಮಗಿಂದು ಯಶಸ್ಸು ಸಿಗುವುದು. ಪುಕ್ಕಟೆಯಾಗಿ ಸಫಲತೆ ಸಿಗುವುದೆಂದು ನಿರ್ಲಕ್ಷ್ಯ ಮಾಡಬೇಡಿ. ಕೌಟುಂಬಿಕ ಅಶಾಂತಿ.

ಮಕರ
ಕೆಲಸದಲ್ಲಿ ಅಕ ಒತ್ತಡ ಅದನ್ನು ಉಲ್ಲಾಸ ದಿಂದಲೆ ನೆರವೇರಿಸುವಿರಿ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚು ವುದು. ಮಕ್ಕಳಿಂದ ಪ್ರಸಿದ್ಧಿ. ಧನಲಾಭ.

ಕುಂಭ
ನಿಮ್ಮ ಗುರಿಯನ್ನು ಬದಲಿಸಬೇಕಾದ ಪ್ರಸಂಗ ಉದ್ಭವಿಸ ಬಹುದು. ಹಳೆಯ ಗುರಿ ಸಾಸುವಲ್ಲಿ ವಿಫಲತೆ ಕಾಣುವಿರಿ. ಮನದಲ್ಲಿ ಗೊಂದಲ.

ಮೀನ
ಉದ್ಯೋಗದಲ್ಲಿ ಕಿರಿಕಿರಿ. ಆದರೆ ಮೇಲಕಾರಿಗಳ ಮಾತಿಗೆ ಅಸಹನೆ ಪಡಬೇಡಿ. ಅದನ್ನು ಸೂರ್ತಿಯಾಗಿ ತೆಗೆದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!