ಮಂಗಳೂರಿಗೆ ಬರಲಿದ್ದಾರೆ ರಾಂಚಿಯ ಯೋಗದಾ ಸತ್ಸಂಗ ಸೊಸೈಟಿ ಹಿರಿಯ ಸನ್ಯಾಸಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಪರಮಹಂಸ ಯೋಗಾನಂದರಿಂದ ಪ್ರಚರಿತವಾದ ಆತ್ಮ ಸಾಕ್ಷಾತ್ಕಾರದ ತತ್ವಬೋಧನೆಗಳನ್ನು ತಿಳಿಸಲು ಮತ್ತು ಧ್ಯಾನ-ಕ್ರಿಯಾಯೋಗದ ಕುರಿತು ಅಭ್ಯಾಸ ತರಗತಿಗಳನ್ನು ನಡೆಸಿ ಕೊಡಲು ರಾಂಚಿಯ ಯೋಗದಾ ಸತ್ಸಂಗ ಸೊಸೈಟಿಯ ಹಿರಿಯ ಸನ್ಯಾಸಿಗಳು ಸೆಪ್ಟೆಂಬರ್ 9ರಂದು ಮಂಗಳೂರಿಗೆ ಬರುತ್ತಿದ್ದಾರೆ.
ಸೆಪ್ಟೆಂಬರ್ 11ರ ವರೆಗಿನ ಈ ಪ್ರವಾಸವು ಧ್ಯಾನ ಮತ್ತು ಕ್ರಿಯಾ ಯೋಗದ ಬಗ್ಗೆ ಆಳವಾದ ಅಭ್ಯಾಸ ಮಾಡಲಿಚ್ಛಿಸುವ ವೈ ಎಸ್ ಎಸ್ ಪಾಠಗಳ ಸಾಧಕರಿಗೆ ಹಾಗೂ ನೂತನ ಸದಸ್ಯರಿಗೆ ಒಂದು ಸದವಕಾಶ ವಾಗಿದ್ದು, ಆತ್ಮ ಸಾಕ್ಷಾತ್ಕಾರ ಮತ್ತು ಶ್ರೀ ಪರಮಹಂಸ ಯೋಗಾನಂದರ ಉಪದೇಶಗಳನ್ನು ತಿಳಿಯಲಿಚ್ಛಿಸುವವರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!