ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಪಂಜಾಬ್ ಅಮೃತಸರದಲ್ಲಿ ಹಿಂದೂ ಮುಖಂಡ ಸುಧೀರ್ ಸೂರಿಯನ್ನು ಹಾಡುಹಗಲೆ ಭಾಷಣ ಮಾಡುವ ಸಂದರ್ಭ ಗುಂಡಿಕ್ಕಿ ಕೊಂದ ಯುವಕನನ್ನು ಶನಿವಾರ ಅಮೃತಸರ ನ್ಯಾಯಾಲಯಕ್ಕೆ ಪೊಲೀಸರು ಭಾರಿ ಬಿಗಿ ಭದ್ರತೆಯೊಂದಿಗೆ ಹಾಜರು ಪಡಿಸಿದರು.
ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.