ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸರಿಯಾದ ಶಾಲಾ ಸಮವಸ್ತ್ರ ಧರಿಸದಿದ್ದಕ್ಕಾಗಿ ಛೀಮಾರಿ ಹಾಕಿಸಿಕೊಂಡ ಮೂವರು ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರನ್ನು ಚಾಕುವಿನಿಂದ ಇರಿದ ಘಟನೆ ದೆಹಲಿಯ ಇಂದರ್ಪುರಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಘಟನೆಯ ಆರೋಪಿಗಳಾದ 12 ನೇ ತರಗತಿ ವಿದ್ಯಾರ್ಥಿ ಅಭಿಮನ್ಯು (18) ಮತ್ತು ಇತರ ಇಬ್ಬರನ್ನು ಡಿಸಿಪಿ (ಪಶ್ಚಿಮ) ಜಿ ಬನ್ಸಾಲ್ ಅವರು ಬಂಧಿಸಿದ್ದಾರೆ.
ಶಿಕ್ಷಕ ಭೂದೇವ್ ಅವರು ಆಳವಾದ ಇರಿತಕೊಳ್ಳಗಾಗಿದ್ದು, ಅವರನ್ನು ಆಸ್ಪತ್ರೆಯಲ್ಲಿ
ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.