ಹೊಸದಿಗಂತ ವರದಿ, ಶಿವಮೊಗ್ಗ:
ಮಹಾನಗರ ಪಾಲಿಕೆ ಸದಸ್ಯ ಶಾಮೀರ್ಖಾನ್ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು, 40 ಕೆಜಿ ಗೋಮಾಂಸ ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿನ ಟಿಪ್ಪುನಗರದ ಮೂರನೇ ತಿರುವಿನಲ್ಲಿ ಇರುವ ಶಾಮೀರ್ ಖಾನ್ ನಿವಾಸದ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಗೋಮಾಂಸ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದುಕೊಂಡಿರುವ ತುಂಗಾ ನಗರ ಪೊಲೀಸರು, ಗೋ ಹತ್ಯಾ ನಿಷೇಧ ಕಾಯಿದೆ ಸೆಕ್ಷನ್ 4,5 ಹಾಗೂ 12ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಕಾರ್ಪೋರೇಟರ್ ಶಾಮೀರ್ ಖಾನ್ ಮತ್ತು ಪುತ್ರ ಇಬಾದ್ ತಮ್ಮ ಸಂಗಡಿಗರೊಡನೆ ಪರಾರಿ ಆಗಿದ್ದಾರೆ. ಮನೆಯಿಂದಲೇ ಇವರು ಗೋಮಾಂಸ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಶಾಮೀರ್ ಖಾನ್ ಪತ್ನಿ ಕಳೆದ ಅವಧಿಯಲ್ಲಿ ಪಾಲಿಕೆ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಇವರುಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ