ಹೊಸದಿಗಂತ ಡಿಜಿಟಲ್ ಡೆಸ್ಕ್
ಪಿಎಫ್ಐ ಸಂಘಟನೆಯಿಂದ ಸಂಭಾವ್ಯ ಬೆದರಿಕೆಗಳ ಹಿನ್ನೆಲೆಯಲ್ಲಿ ಕೇರಳದ ಐವರು ಆರ್ಎಸ್ಎಸ್ ನಾಯಕರಿಗೆ ಕೇಂದ್ರವು ʼವೈʼ ಕೆಟಗರಿ ಭದ್ರತೆಯನ್ನು ನೀಡಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳು ಇತ್ತೀಚೆಗೆ ಇಸ್ಲಾಮಿಕ್ ಸಂಘಟನೆ ಪಿಎಫ್ ಐ ಮೇಲೆ ನಡೆಸಿದ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ಐವರು ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಯಕರ ಹೆಸರುಗಳು ಪಿಎಫ್ಐ ದಾಳಿಯ ರಾಡಾರ್ನಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ಪಿಎಫ್ಐ ಸಂಘಟನೆಯನ್ನು ಈ ವಾರದ ಆರಂಭದಲ್ಲಿ ನಿಷೇಧಿಸಲಾಗಿದೆ.
ಕೇಂದ್ರೀಯ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಒದಗಿಸಿದ ದಾಖಲೆಗಳು ಹಾಗೂ ಶಿಫಾರಸುಗಳ ಆಧಾರದ ಮೇಲೆ ಐದು ಆರ್ಎಸ್ಎಸ್ ನಾಯಕರಿಗೆ ಕೇಂದ್ರ ಭದ್ರತಾ ಶ್ರೇಣಿಯ -ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ವಿಐಪಿ ಭದ್ರತಾ ವಿಭಾಗವನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಮೂಲ ಹೇಳಿವೆ.
ಪ್ರತಿ ನಾಯಕರಿಗೆ ಸುಮಾರು ಎರಡರಿಂದ ಮೂರು ಸಶಸ್ತ್ರ ಕಮಾಂಡೋಗಳನ್ನು ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬಿಹಾರದ ಬಿಜೆಪಿ ಮುಖ್ಯಸ್ಥ ಮತ್ತು ಪಶ್ಚಿಮ ಚಂಪಾರಣ್ನ ಸಂಸದ ಸಂಜಯ್ ಜೈಸ್ವಾಲ್ ಅವರಿಗೂ ಇದೇ ರೀತಿಯ ರಕ್ಷಣೆ ನೀಡಲಾಗಿದೆ.
ಈ ಆರು ನಾಯಕರ ಸೇರ್ಪಡೆಯೊಂದಿಗೆ, ಸಿಆರ್ಪಿಎಫ್ ತನ್ನ ವಿಐಪಿ ಭದ್ರತಾ ನೀತಿಯ ಅಡಿಯಲ್ಲಿ ಕನಿಷ್ಠ 125 ಜನರಿಗೆ ಭದ್ರತೆ ನೀಡುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ