ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣು ಮಗು ಹುಟ್ಟಿದೆ ಎಂದು ಸಿಟ್ಟಿನಲ್ಲಿ ಪಾಪಿಯೋರ್ವ 9 ತಿಂಗಳ ಹಸುಗೂಸನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಅಮಾನವೀಯ ಪ್ರಕರಣ ಜಿಲ್ಲೆಯ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ತನುಶ್ರೀ ಮೃತ ಪಟ್ಟ ಹಸುಗೂಸು. ರಾಮು ಪಲ್ಲುರ್ ಎಂಬಾತನಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿನ ಆರೈಕೆ ಮಾಡುವುದರಿಂದ ತನ್ನ ಪತ್ನಿ ಕೂಲಿ ಕೆಲಸಕ್ಕೆ ತೆರಳದೆ ಮನೆಯಲ್ಲಿ ಇರುತ್ತಾಳೆ ಎಂಬ ಕ್ಷುಲ್ಲಕ ಕಾರಣದಿಂದ, ತನ್ನ ಪತ್ನಿಗೆ ಮಗುವಿನ ಆರೈಕೆಯನ್ನು ತಾನು ಮಾಡುವುದಾಗಿ ಹೇಳಿ ಹೆಂಡತಿಯನ್ನು ಕೂಲಿ ಕೆಲಸಕ್ಕೆ ಹೋಗು ಎಂದು ಕಳುಹಿಸಿದ್ದಾನೆ.
ಬಳಿಕ ಕುಡಿದ ಮತ್ತಿನಲ್ಲಿ ಮಗುವಿನ ಕೊರಳಿನಲ್ಲಿದ್ದ ದಾರದಿಂದ ಮಗುವಿನ ಕತ್ತಿಗೆ ಬಿಗಿಯಾಗಿ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪತ್ನಿ ಸಾವಿತ್ರಮ್ಮ ಆರೋಪಿಸಿ, ಸೈದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.