ಹೊಸದಿಗಂತ ವರದಿ ಬಾಗಲಕೋಟೆ :
ಜಾತಿ ಜನಗಣತಿಗೆ ವಿರೋಧವಿಲ್ಲ ಆದರೆ ವೈಜ್ಞಾನಿಕ ವಾಗಿ ಹಾಗೂ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ಅಂಕಿ ಅಂಶ ಬಹಿರಂಗಪಡಿಸಿ. ಯಾವುದೋ ಒಂದು ದುರುದ್ದೇಶ ಇಟ್ಟುಕೊಂಡು ಜಾತಿ ಜನಗಣತಿ ಯಲ್ಲಿ ಅಂಕಿಸಂಖ್ಯೆ ಕಡಿಮೆ ತೋರಿಸಲು ಹೊರಟಿರುವ ಸರ್ಕಾರದ ನಡೆಯನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಖಂಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಸೋಹ, ಧಾರ್ಮಿಕಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆಯನ್ನು ವೀರಶೈವ ಲಿಂಗಾಯತ ಸಮುದಾಯ ನೀಡಿದೆ. ಪ್ರಗತಿಗೆ ಇನ್ಬೊಂದು ಹೆಸರೇ ವೀರಶೈವ ವಲಿಂಗಾಯತ ಸಮುದಾಯ ಎಂದರು.
ಸರ್ಕಾರದ ಸೌಲಭ್ಯ ಕೊಡುವ ಸಲುವಾಗಿ ಕರ್ನಾಟಕ ಏಕೀಕರಣದಿಂದ ಹಿಡಿದು ಇಲ್ಲಿಯವರೆಗೆ ಮುಖ್ಯಮಂತ್ರಿಯಾದವರು ಜನಸಂಖ್ಯೆ ತೋರಿಸುವುದು,ಜಾತಿಯನ್ನು ಒಡೆಯುವ ಕೆಲಸ ಯಾರೂ ಮಾಡಿಲ್ಲ ಆದರೆ ಈಗಿನ ರಾಜ್ಯ ಸರ್ಕಾರದವರು ಮಾತ್ರ ಜಾತಿ ಹಾಗೂ ಒಳಪಂಗಡಗಳನ್ನು ಒಡೆದು ಹಾಕುವ ಹುನ್ನಾರ ಮಾಡುತ್ತಿದ್ದಾರೆ.ವೀರಶೈವ , ಲಿಂಗಾಯತ ಎಂದು ನಮ್ಮಲ್ಲಿ ಬೇಧ ಭಾವ ಇಲ್ಲ ಎಂದರು.
ಹಿಂದೆ ಲಿಂಗಾಯತ ಬೇರೆ ಮಾಡಲು ಹೋದವರು ಏನು ಪರಿಣಾಮ ಎದುರಿಸಿದ್ದಾರೆ ಎಂಬುದನ್ನು ಎಲ್ಲರಿಗೂ ತಿಳಿದವಿಷಯ ಎಂದರು.
ರೈತರು,ಯುವಕರು, ಮಹಿಳೆ,ಬಡವರು ಎಂಬ ನಾಲ್ಕು ಜಾತಿಗಳನ್ನು ಮಾಡಿ ಸಾಕಷ್ಟು ಸರ್ಕಾರಿ ಯೋಜನೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಇರುವ ಸರ್ಕಾರ ಮಾತ್ರ ಸೌಲಭ್ಯ ಕೊಡಲು ಜಾತಿಗಳನ್ನು ವಿಂಗಡನೆ ಮಾಡುವುದಕ್ಕೆ ಕೈಹಾಕಿದ್ದಾರೆ ಎಂದರು. ಡಿ.23 ರಿಂದ24 ರವರೆಗೆ ದಾವಣಗೆರೆ ಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ೨೪ನೇ ಮಹಾ ಅಧಿವೇಶನ ನಡೆಯಲಿದೆ ಎಂದರು.