ಮಳೆಯನ್ನೂ ಲೆಕ್ಕಿಸದೆ ಪ್ರಧಾನಿ ಮೋದಿ ಕಟೌಟ್‌ ಮೇಲಿನ ನೀರು ಒರೆಸಿದ ಅಭಿಮಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಚುನಾವಣಾ ಕಣ ರಂಗೇರಿದ್ದು, ಈಗಾಗಲೇ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ವಿವಿಧ ರೋಡ್ ಶೋ ನಡೆಸಲು ಸಜ್ಜಾಗುತ್ತಿದ್ದಾರೆ.

ಇದರ ಭಾಗವಾಗಿ ಬೆಂಗಳೂರಿನ ದೇವನಹಳ್ಳಿ ಬಳಿ ಕೇಂದ್ರ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ಆಯೋಜಿಸಲಾಗಿತ್ತು. ಆದ್ರೆ ಮಳೆಯಿಂದ ರದ್ದಾಗಿದೆ.

ಆದ್ರೆ ಇಲ್ಲಿ ಒಂದು ವಿಶೇಷ ಸನ್ನಿವೇಶ ಎಲ್ಲರನ್ನು ತನ್ನತ ಸೆಳೆದಿದೆ. ಅದೇನೆಂದರೆ ಇಲ್ಲಿ ರಸ್ತೆ ಬದಿ ಇರಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌಟ್‌ ಮೇಲಿದ್ದ ನೀರನ್ನು ಗ್ರಾಮಸ್ಥನೊಬ್ಬ ಒರೆಸಿದ ವೀಡಿಯೀ ಎಲ್ಲೆಡೆ ವೈರಲ್‌ ಆಗಿದೆ.

ಹೌದು, ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಯಾವುದೇ ಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿ ಎಂದರೆ ಸಾಕು, ಯುವಕರಿಂದ ವೃದ್ಧರವರೆಗೂ ಅಭಿಮಾನಿಗಳು ಇರುತ್ತಾರೆ. ಅವರು ಒಮ್ಮೆ ಪ್ರಧಾನಿ ಮೋದಿಯನ್ನು ಕಂಡರೆ ಆಸೆಗಳಿರುತ್ತದೆ. ಇನ್ನು ಅವರ ಫೋಟೋವನ್ನು ನೋಡಿದರೆ ಗೌರವವನ್ನು ಕೊಡುವವರ ಸಂಖ್ಯೆಯೂ ಸಾಕಷ್ಟಿದೆ.

ಕೇಂದ್ರ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ಹಿನ್ನೆಲೆ ನರೇಂದ್ರ ಮೋದಿ ಅವರ ಕಟೌಟ್‌ಗಳನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಮಳೆಯಿಂದಾಗಿ ರೋಡ್‌ ಶೋ ರದ್ದುಗೊಳಿಸಲಾಯಿತು. ಆಗ ಮಳೆಯಲ್ಲಿಯೇ ಒದ್ದೆಯಾಗುತ್ತಿದ್ದ ಕಟೌಟ್‌ ಅನ್ನು ಸ್ಥಳೀಯ ಅಭಿಮಾನಿಯೊಬ್ಬ ತನ್ನ ಟವೆಲ್‌ನಿಂದ ಒರೆಸಿ ಸ್ವಚ್ಛಗೊಳಿಸಿದನು.

ಮಳೆಯಿಂದಾಗಿ ದೇವನಹಳ್ಳಿಯ ಬಹುತೇಕ ಗ್ರಾಮಸ್ಥರು ಆಶ್ರಯ ಪಡೆಯಲು ಹರಸಾಹಸ ಪಡುತ್ತಿದ್ದರು. ಆದರೆ, ಈ ವ್ಯಕ್ತಿ ಮಾತ್ರ ತಮ್ಮ ಟವೆಲ್‌ನಿಂದ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ನಲ್ಲಿ ನೀರು ಒರೆಸುತ್ತಿರುವುದು ಕಂಡುಬಂದಿದೆ. ಬಿಳಿ ಅಂಗಿ ಮತ್ತು ಧೋತಿ ತೊಟ್ಟಿದ್ದ ಗ್ರಾಮೀಣ ವ್ಯಕ್ತಿ ತನ್ನ ಟವೆಲ್‌ನಿಂದ ಮೋದಿ ಕಟೌಟ್‌ ಒರೆಸಿ ಅಲ್ಲಿಂದ ಮುಂದೆ ಹೋಗಿದ್ದಾರೆ.

ಇನ್ನು ನರೇಂದ್ರ ಮೋದಿ ಅವರ ಕಟೌಟ್‌ ಒರೆಸಿದ್ದಕ್ಕೆ ನೀವು ಬಿಜೆಪಿಯವರ ಬಳಿ ಹಣ ಪಡೆದಿದ್ದೀರಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವನಹಳ್ಳಿ ಗ್ರಾಮಸ್ಥರು, ಪ್ರಧಾನಿ ಮೋದಿಯವರ ಮೇಲಿರುವ ವಿಶ್ವಾಸಕ್ಕಾಗಿ ಕಟೌಟ್‌ ಮೇಲಿದ್ದ ಮಳೆ ನೀರನ್ನು ಒರೆಸಿದ್ದಾಗಿ ಹೇಳಿದರು. ‘ಮೋದಿ ಜಿ ದೇವರು, ಯಾರೂ ನನಗೆ ಹಣ ನೀಡಿಲ್ಲ’ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!