ಹೊಸದಿಗಂತ ವರದಿ, ಕುಮಟಾ:
ವಿಕಲಚೇತನ ಮಗನನ್ನು ಕೊಂದ ಅನಾರೋಗ್ಯಪೀಡಿತ ತಂದೆ ತಾನೂ ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಪಟ್ಟಣದ ಪುರಸಭೆ ವಸತಿಗೃಹ ಕಾಲನಿಯಲ್ಲಿ ನಡೆದಿದೆ.
ಪುರಸಭೆ ವಸತಿಗೃಹದ ನಿವಾಸಿ ಶ್ರೀಧರ ಹರಿಜನ (45) ಎಂಬಾತನೇ ತನ್ನ 15 ವರ್ಷ ವಯಸ್ಸಿನ ಮಗ ಪ್ರೀತಂ ಎಂಬಾತನನ್ನು ಸಾಯಿಸಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಶ್ರೀಧರ ಹರಿಜನ ಅನಾರೋಗ್ಯದಿಂದ ಬಳಲುತ್ತಿದ್ದು ಬಹಳಷ್ಟು ಚಿಕಿತ್ಸೆ ಪಡೆದರೂ ಕಡಿಮೆ ಆಗದ ಕಾರಣ ತನ್ನ ವಿಕಲಚೇತನ ಮಗನನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಸಾಯಿಸಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.