ನೆನಪಿದ್ಯಾ? ಕೊರೋನಾ ಬಂತೆಂದಾಗ ಎಲ್ಲರೂ ಅರಿಶಿಣ ಹಾಲು, ಕಷಾಯ, ಬಿಸಿ ಆಹಾರ ಎಷ್ಟೇಲ್ಲಾ ಕಾಳಜಿ ವಹಿಸಿದ್ದೆವು, ಆದರೆ ಈಗ ಕೊರೋನಾ ಹಾವಳಿ ಕಮ್ಮಿಯಾಗುತ್ತಿದ್ದಂತೆ ಎಲ್ಲವೂ ಮರೆತೇ ಹೋಗಿದೆ. ಈ ಹಿಂದೆ ಪ್ರಧಾನಿ ಮೋದಿ ಅವರೂ ಅರಿಶಿಣ ಹಾಲು ಕುಡಿಯುತ್ತೇನೆ ಎಂದು ಹೇಳಿದ್ದರು.. ಏನಿದೆ ಅರಿಶಿಣ ಹಾಲಿನಲ್ಲಿ ? ಇದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆಯಾ?
- ಮೊದಲನೇ ಹಾಗೂ ಮುಖ್ಯವಾದ ಗುಣ ರೋಗನಿರೋಧಕ ಶಕ್ತಿ ಹೆಚ್ಚಿಸೋದು, ಹೌದು, ಅರಿಶಿಣದ ಗುಣಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.
- ಕೆಮ್ಮು, ಶೀತ,ನೆಗಡಿಯಂಥ ಸಾಮಾನ್ಯ ರೋಗಗಳು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ, ಬಂದರೂ ಬಾಧೆ ನೀಡದು.
- ಆಂಟಿಆಕ್ಸಿಡೆಂಟ್ಸ್ ಹೇರಳವಾಗಿದ್ದು, ಆರೋಗ್ಯಕ್ಕೆ ಇದು ಅತ್ಯುತ್ತಮ.
- ಮಸಲ್ ಹಾಗೂ ಜಾಯಿಂಟ್ ನೋವು ಇರುವವರಿಗೆ ನೋವು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
- ನೆನಪಿನ ಶಕ್ತಿ ಹಾಗೂ ಮೆದುಳನ್ನು ಹೆಚ್ಚು ಚುರುಕು ಮಾಡುತ್ತದೆ.
- ಅರಿಶಿಣ ಸೇವನೆ ನಿಮ್ಮ ಎನರ್ಜಿ ಹೆಚ್ಚು ಮಾಡುತ್ತದೆ, ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ.
- ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರ ಬರೋದಿಲ್ಲ.
- ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ
- ಕ್ಯಾನ್ಸರ್ ರಿಸ್ಕ್ ಬಾರದಂತೆ ತಡೆಗಟ್ಟುತ್ತದೆ
- ಇದರಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಹಾಗೂ ಆಂಟಿವೈರಲ್ ಗುಣಗಳು ಇವೆ
- ಶುಂಠಿ ಹಾಗೂ ಅರಿಶಿಣ ಜೀರ್ಣಕ್ರಿಯೆ ಹೆಚ್ಚು ಮಾಡುತ್ತವೆ