ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ರನ್ನು ಏಪ್ರಿಲ್ 30ಕ್ಕೆ ಮುಗಿಸಿಬಿಡ್ತೀವಿ ಅನ್ನೋ ಬೆದರಿಕೆ ಕರೆ ಬಂದಿದೆ.
ಹೌದು, ಸಲ್ಮಾನ್ ಖಾನ್ಗೆ ಇತ್ತೀಚೆಗೆ ಸಾಕಷ್ಟು ಬಾರಿ ಬೆದರಿಕೆ ಕರೆಗಳು ಬಂದಿದ್ದು, ಬುಲೆಟ್ ಪ್ರೂಫ್ ಕಾರ್ನಲ್ಲಿ ಸಲ್ಮಾನ್ ಖಾನ್ ಓಡಾಡುತ್ತಿದ್ದಾರೆ.
ಲಾರೆನ್ಸ್ ಬಿಷ್ನೋಯ್ ಕೊಲೆಗೆ ಪ್ಲಾನ್ ಮಾಡಿದ್ದು, ಸಲ್ಮಾನ್ ಖಾನ್ಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಇಷ್ಟೆಲ್ಲಾ ಬಂದೋಬಸ್ತ್ ನಡುವೆಯೂ ಮತ್ತೆ ಬೆದರಿಕೆ ಕರೆ ಬಂದಿದ್ದು, ಕೊಲೆ ಮಾಡುವುದಕ್ಕೆ ದಿನಾಂಕ ನಿಗದಿ ಮಾಡಿರುವುದಾಗಿ ಕರೆ ಮಾಡಿದವರು ಹೇಳಿದ್ದಾರೆ.
ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ಸ್ಟರ್ ಆಗಿದ್ದು, ಸಿಧು ಮೂಸೆವಾಲ ಕೊಲೆಯ ಹಿಂದೆ ಅವರ ಕೈವಾಡ ಇದೆ ಎನ್ನಲಾಗಿದೆ. ಬಿಷ್ನೋಯಿ ಸಮುದಾಯದವರು ಕೃಷ್ಣಮೃಗವನ್ನು ದೇವರಿಗೆ ಸಮಾನವಾಗಿ ಪೂಜಿಸುತ್ತಾರೆ. ಸಲ್ಮಾನ್ ಕೃಷ್ಣಮೃಗ ಬೇಟೆ ಆಡಿದ್ದು ದ್ವೇಷ ಹುಟ್ಟಲು ಕಾರಣವಾಗಿದೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಏಪ್ರಿಲ್ 30ರಂದು ಕೊಲೆ ಮಾಡುವುದಾಗಿ ಹೇಳಿದ್ದಾರೆ.