ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಉತ್ಸವದ ಅಂಗವಾಗಿ ಹೆಲಿಕಾಪ್ಟರ್ ಸವಾರಿಯನ್ನು ಸಾರ್ವಜನಿಕರಿಗಾಗಿ ಶುರುಮಾಡಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬ ಶನಿವಾರ ಬೀದರ ಉತ್ಸವದ ಅಂಗವಾಗಿ ಬಿ.ವಿ.ಬಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೆಲಿಕ್ಯಾಪ್ಟರ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಬೀದರ ಉತ್ಸವದ ಆನಂದವನ್ನು ಸವಿಯಬೇಕು. ಮೂರು ದಿನ ಉತ್ಸವ ಜರುಗಲಿದ್ದು, ಹೆಚ್ಚಿನ ಜನರು ಆಸಕ್ತಿ ತೋರಿಸಿ ಹೆಲಿಕಾಪ್ಟರ್ನಲ್ಲಿ ಕುಳಿತು ಬೀದರ್ ಏರಿಯಲ್ ವ್ಯೂ ಸವಿಯಬೇಕು. ಈ ರೀತಿ ಉತ್ಸವಗಳು ಬಹಳ ಅಪರೂಪ, ಅವಕಾಶ ಸಿಕ್ಕಾಗ ಸೂಕ್ತವಾಗಿ ಅದನ್ನು ಬಳಸಿಕೊಳ್ಳಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಹೇಳಿದ್ದಾರೆ. ಹೆಲಿಕಾಪ್ಟರ್ ಹತ್ತಲು ಬೆಂಗಳೂರಿಗೆ ಹೋಗಬೇಕು. ಆದರೆ ಈ ಅವಕಾಶ ನಮ್ಮ ನಗರದಲ್ಲೇ ಇದೆ ಎಂದಿದ್ದಾರೆ