ಕೊನೆಗೂ ಬೋನಿಗೆ ಬಿತ್ತು ಹರಮಘಟ್ಟದ ಜನತೆಯನ್ನು ಹೈರಾಣಾಗಿಸಿದ್ದ ಚಿರತೆ

ಹೊಸದಿಗಂತ ವರದಿ ಶಿವಮೊಗ್ಗ: 

ಅರಣ್ಯ ಇಲಾಖೆ ಹಮಘಟ್ಟದಲ್ಲಿ ಇಟ್ಟಿದ್ದ ಬೋನಿಗೆ ಶುಕ್ರವಾರ ಬೆಳಗಿನಜಾವ ಚಿರತೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ಹರಮಘಟ್ಟ‌ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಹಸು ಹಾಗು ನಾಯಿಗಳ ಮೇಲೆ ದಾಳಿ‌ನಡೆಸಿತ್ತು. ಇದರಿಂದಾಗಿ ಗ್ರಾಮಸ್ಥರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆ‌ ಮೇಲೆ ಒತ್ತಡ ತಂದಿದ್ದರು.

ಇದರಿಂದಾಗಿ ಅರಣ್ಯ ಇಲಾಖೆಯವರು ಬೋನು‌ ಇಟ್ಟು ಕಾಯುತ್ತಿದ್ದು, ಇದೀಗ ಚಿರತೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಭಂದಿ ಧಾವಿಸಿದ್ದಾರೆ. ಚಿರತೆ ನೋಡಲು ಗ್ರಾಮಸ್ಥರ ದಂಡೇ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!