ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳಿಗೆ ವ್ಯಾಟ್ಸಾಪ್ ನಲ್ಲಿ ಸಾಯುತ್ತೇನೆಂದು ಸಂದೇಶ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಆಶಾಲತಾ (62) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಆಶಾಲತಾ ಮತ್ತು ಆಕೆಯ ದತ್ತು ಪುತ್ರಿಯಾದ ಶಮೀಕ್ಷಾಳೊಂದಿಗೆ ವಾಸವಿದ್ದು, ಅವರ ಗಂಡ ಮೃತಪಟ್ಟಿರುತ್ತಾರೆ. ತಾಯಿ ಮತ್ತು ಮಗಳಿಗೆ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿರುತ್ತದೆ.
ಆಶಾಲತಾ ಎ. ೭ ರಂದು ಮನೆಯ ಹಾಲ್ ನ ಫ್ಯಾನ್ ಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಮರಣದಲ್ಲಿ ತನಗೆ ಅನುಮಾನವಿದೆ ಎಂದು ಆಶಾಲತಾ ಅವರ ತಂಗಿ ಜ್ಯೋತಿಪ್ರಭಾ ಬ್ರಹ್ಮಾವರ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.