ಬೆಂಗಳೂರು ಕರಗ ಉತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ: ಹೂವಿನ ಮೆರವಣಿಗೆಯಲ್ಲಿ ಕಂಗೊಳಿಸಿದ ದ್ರೌಪದಿದೇವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐತಿಹಾಸಿಕ ಸಂಪ್ರದಾಯ, ಭಕ್ತಿ ಮತ್ತು ಸೌಹಾರ್ದದ ಪ್ರತೀಕವಾಗಿರುವ ಬೆಂಗಳೂರು ಕರಗ ಉತ್ಸವ ಈ ವರ್ಷವೂ ಅದ್ದೂರಿಯಾಗಿ ನೆರವೇರಿತು. ಬುಧವಾರ ತಡರಾತ್ರಿ ನಗರದ ಹೃದಯಭಾಗ ಭಕ್ತರ ಜಯಘೋಷದಿಂದ ಮೊಳಗಿದರೆ, ಮಲ್ಲಿಗೆ ಹೂಗಳಿಂದ ಅಲಂಕರಿಸಲ್ಪಟ್ಟ ದ್ರೌಪದಿದೇವಿಯ ಕರಗ ರಾತ್ರಿಯಿಡೀ ನಗರ ಬೀದಿಗಳಲ್ಲಿ ಸಂಚರಿಸಿ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿತು. ಸತತ 16ನೇ ಬಾರಿಗೆ ಅರ್ಚಕ ಎ. ಜ್ಞಾನೇಂದ್ರ ಅವರು ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗವನ್ನು ಹೊತ್ತು ಹೊರಬಂದರು. ವೀರಕುಮಾರರ ಘೋಷಣೆ, ಭಕ್ತರ ಗೋವಿಂದ ನಾಮಸ್ಮರಣೆ … Continue reading ಬೆಂಗಳೂರು ಕರಗ ಉತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ: ಹೂವಿನ ಮೆರವಣಿಗೆಯಲ್ಲಿ ಕಂಗೊಳಿಸಿದ ದ್ರೌಪದಿದೇವಿ