ಗೊಬ್ಬರ ಸಿಂಪಡಿಸಲು ಗದ್ದೆಗೆ ಹೋಗಿದ್ದ ರೈತನಿಗೆ ಕಚ್ಚಿದ ಹಾವು

ಹೊಸದಿಗಂತ ವರದಿ,ಮುಂಡಗೋಡ:

ತಾಲೂಕಿನ ಚಿಗಳ್ಳಿ ಗ್ರಾಮದ ಗದ್ದೆಯೊಂದರಲ್ಲಿ ಗೊಬ್ಬರ ಸಿಂಪಡಣೆ ಮಾಡಲು ಹೋಗಿದ್ದ ರೈತನಿಗೆ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ ರೈತ ಮೃತಪಟ್ಟ ಘಟನೆ ಭಾನುವಾರ ಜರುಗಿದೆ.
ಪಾಂಡುರಂಗ ಚೆನ್ನಾಪುರ (೫೦) ಹಾವು ಕಚ್ಚಿ ಸಾವನ್ನಪ್ಪಿದ ರೈತನಾಗಿದ್ದಾನೆ. ಈತನು ಭಾನುವಾರ ತನ್ನ ಗೋವಿನ ಜೋಳದ ಗದ್ದೆಯಲ್ಲಿ ಗೊಬ್ಬರ ಸಿಂಪಡಿಸಲು ಹೋದಾಗ ಆಕಸ್ಮಿಕವಾಗಿ ವಿಷಕಾರಿ ಹಾವೊಂದು ಕಚ್ಚಿದೆ. ಕೂಡಲೇ ಕುಟುಂಬದವರು ಮುಂಡಗೋಡ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದಾನೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!