ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂಢನಂಬಿಕೆಗಳಿಗೆ ಮುಗ್ಧರ ಪ್ರಾಣ ಹೋಗಿರುವುದು ಇದೇ ಮೊದಲೇನಲ್ಲ, ದೆವ್ವ ಬಿಡಿಸ್ತೇನೆ ಎಂದು ಮಾಂತ್ರಿಕನೊಬ್ಬ ಮಗುವಿನ ಪ್ರಾಣವನ್ನೇ ತೆಗೆದಿದ್ದಾನೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾಂತ್ರಿಕನೊಬ್ಬ ಭೂತ ಓಡಿಸುವ ಸಲುವಾಗಿ 14 ವರ್ಷದ ಬಾಲಕನನ್ನು ಮನಬಂದಂಥೆ ಥಳಿಸಿದ್ದಾನೆ, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರ್ಯನ್ ದೀಪಕ್ ಎನ್ನುವಾತ ಮಗನಿಗೆ ಭೂತವಿದೆ ಎಂದು ಮಾಂತ್ರಿಕನ ಬಳಿ ಕರೆತಂದಿದ್ದು, ಮಾಂತ್ರಿಕ ಮಗುವಿಗೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ವೈದ್ಯರ ಬಳಿ ಕರೆತಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.