ಹೊಸದಿಗಂತ ವರದಿ ಕಲಬುರಗಿ:
ಬೈಕ್ ಮತ್ತು ಡಿಸೇಲ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಡಬೀರನಳ್ಳಿ ಬಳಿ ನಡೆದಿದೆ.
ಸಿದ್ದಪ್ಪಾ (22) ಎಂಬ ಯುವಕ ಸಾವನ್ನಪ್ಪಿರುವ ಯುವಕನಾಗಿದ್ದು,ಸುಲೆಪೇಟ್,ನಿಂದ ತಮ್ಮ ಗ್ರಾಮವಾದ ಹೊಡಬೀರನಳ್ಳಿ ಕಡೆಗೆ ಹೊರಟಿದ್ದನು ಎಂದು ತಿಳಿದುಬಂದಿದೆ.
ಬೈಕ್ ಮೇಲೆ ಒಬ್ಬನೆ ಹೊರಟಾಗ ಈ ಅವಘಡ ಸಂಭವಿಸಿದೆ. ಸುಲೆಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.