ಹೊಸದಿಗಂತ ವರದಿ ಬಾಗಲಕೋಟೆ:
ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸ್ಸು ಬರುವ ಸಮಯದಲ್ಲಿ ರಸ್ತೆ ಅಪಘಾತ ಉಂಟಾಗಿ ಮೃತ ಪಟ್ಟಿರುವ ದಾರುಣ್ಯ ಘಟನೆ ಬಾಗಲಕೋಟೆ ನಗರದ ನವನಗರದಲ್ಲಿ ಬಳಿ ನಡೆದಿದೆ.
ಅತಿ ಜೋರಾಗಿ ಬೈಕ್ ಚಲಾಯಿಸಿ ಬರುವಾಗ,ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ, ಬೈಕ್ ಸವಾರರ ಇಬ್ಬರು ಮೃತ ಪಟ್ಟಿದ್ದಾರೆ.
ಬಾಗಲಕೋಟೆ ನಗರದ ಗದ್ದನಕೇರಿ ತಾಂಡ ಬಳಿ ಈ ಘಟನೆ ನಡೆದಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೇಹ ಎರಡು ಭಾಗವಾಗಿ ತುಂಡರಿಸಿದ್ದು, ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಂಗಮೇಶ (21) ಹಾಗೂ ಕಿರಣ(21) ಮೃತ ಯುವಕರು. ಸಂಗಮೇಶ ಎನ್ನುವ ಯುವಕನ ಹುಟ್ಟು ಹಬ್ಬದ ಹಿನ್ನೆಲೆ,ಹುಟ್ಟುಹಬ್ಬ ಆಚರಿಸಿಕೊಂಡು ಪಾರ್ಟಿ ಮಾಡಿಕೊಂಡು ವಾಪಸ್ಸು ಬರುವಾಗ ಈ ಘಟನೆ ನಡೆದಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.