ಹೊಸದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಅಕ್ರಮದ ಪ್ರಕರಣದಲ್ಲಿ ಭಾಗಿಯಾಗಿರುವ ಸದ್ದಾಂ ಎಂಬ ಆರೋಪಿಗೆ ಅವರ ಸಹೋದರರೊಬ್ಬರು ರಂಜಾನ್ ನಿಮಿತ್ತ ಹಬ್ಬಕ್ಕೆ ಹೊಸ ಬಟ್ಟೆಯನ್ನು ತಂದು ನೀಡಿದ್ದಾರೆ.
ಈತ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆಗಿರುವ ದಿವ್ಯಾ ಹಾಗರಗಿ ಕಾರು ಚಾಲಕನಾಗಿದ್ದು, ವಿಚಾರಣೆಗಾಘಿ ಆತನನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ನಾಳೆ ರಂಜಾನ್ ಹಬ್ಬದ ಪ್ರಯುಕ್ತ ಸಹೋದರ ಅಲ್ತಾಫ್ ತನ್ನ ಅಣ್ಣನಿಗೆ ಹೊಸ ಬಟ್ಟೆ ಖರೀದಿ ಮಾಡಿದ್ದಾನೆ. ಸಹೋದರನಿಗಾಗಿ ತಂದ ಹೊಸ ಬಟ್ಟೆಯನ್ನು ಸಿಐಡಿ ಅಧಿಕಾರಿಗಳಿಗೆ ಕೊಟ್ಟು ತನ್ನ ಅಣ್ಣನಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.