ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಂಭ್ರಮ ಮನೆ ಮಾಡಿತ್ತು. ಕುದ್ದು ಪ್ರಧಾನಿ ಮೋದಿ ಕೂಡ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ಟ್ವೀಟ್ ನಲ್ಲಿ, ‘ರಾಜ್ಯದ ಬಾವುಟವನ್ನು ಆಕಾಶದೆತ್ತರಕ್ಕೆ ಹಾರಿಸಿದ ಆರ್.ಆರ್.ಆರ್ ಟೀಮ್ ಗೆ ಧನ್ಯವಾದಗಳು’ ಎಂದು ತಿಳಿಸಿದ್ದರು.
ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಗಾಯಕ ಅದ್ನಾನ್ ಸಾಮಿ, ಮೊದಲು ದೇಶ, ಆಮೇಲೆ ರಾಜ್ಯ. ತೆಲುಗು ಬಾವುಟ ಎಂದು ಬರೆದು ವಿಭಜಿಸಬೇಡಿ’ ಎಂದು ಪ್ರತಿಕ್ರಿಯೆ ನೀಡಿದ್ದರು.
ಇದೀಗ ಇವರ ಈ ಮಾತು ಚರ್ಚೆಗೂ ಕಾರಣವಾಗಿದೆ.
ಅದ್ವಾನ್ ಸಾಮಿ ಮಾಡಿದ ಟ್ವೀಟ್ ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾತಿರುಗೇಟು ನೀಡಿದ್ದು, ‘ನೀವು ಹೇಳಿದಂತೆ ನಾವು ಭಾರತೀಯರು ನಿಜ. ಆದರೆ, ನಾವು ತೆಲುಗು, ಕನ್ನಡಿಗರು, ತಮಿಳಿಗರು. ನಮ್ಮದೇ ಆದ ಭಾಷೆ, ಬಾವುಟ ಹೊಂದಿದ್ದೇವೆ. ನಾವೆಲ್ಲರೂ ಭಾರತೀಯರು ಜೊತೆಗೆ ವಿವಿಧ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದವರು’ ಎಂದು ಉತ್ತರಿಸಿದ್ದಾರೆ.