ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ನ ಇನ್ನಷ್ಟು ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಈಗಾಗಲೇ ಹಲವು ಮುಖಂಡರು ಮತ್ತು ಯುವ ಕಾರ್ಯಕರ್ತರ ಪಕ್ಷ ಸೇರ್ಪಡೆಯಿಂದ ಬಿಜೆಪಿ ಬಲವು ಇನ್ನಷ್ಟು ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ತಿಳಿಸಿದರು.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಲವಾರು ಮುಖಂಡರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪಕ್ಷ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅವರ ಉಪಸ್ಥಿತಿಯಲ್ಲಿ ಈ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಆನ್ಲೈನ್ ಸದಸ್ಯತ್ವ ಸ್ವೀಕಾರದ ಮೂಲಕ ಮುಖಂಡರಾದ ದಿವಾಕರ್ ಗೌಡ, ದೇವೇಂದ್ರ, ಜಗದೀಶ್, ಪಾಪಣ್ಣ ಮತ್ತು ದಿವಾಕರ್ ಗೌಡ ಅವರಲ್ಲದೇ, ಬೆಂಬಲಿಗರಾದ ಪುಣ್ಣರಾಜಣ್ಣ, ಸಂದೀಪ್, ಶರತ್, ಅಣ್ಣಗೌಡ, ನರಸೇಗೌಡ, ತಿಮ್ಮಯ್ಯ, ರಾಮೇಗೌಡ, ಲೋಕೇಶ್, ಅಣ್ಣೆಚಾಕನಹಳ್ಳಿ, ದಿಲೀಪ್, ಉದಯ್ ಹಾಗೂ ಅನೇಕ ಯುವ ಮುಖಂಡರು ಬಿಜೆಪಿ ಸೇರಿದರು.