ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಖಿ ಸಾವಂತ್ ದೂರಿನ ಅನ್ವಯ ಆದಿಲ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದಿಲ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಖಿ ಹೇಳಿದ್ದು, ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ವಿಚಾರಣೆ ವೇಳೆ ಹೇಳಿದ್ದು, ವಾಪಾಸಾಗುವ ರಾಖಿ ಮತ್ತೆ ಮಾಧ್ಯಮಗಳ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಆದಿಲ್ ಸರಿಯಾಗೋದಕ್ಕೆ ನೂರು ಅವಕಾಶ ಕೊಟ್ಟೆ. ಅವನಿಗೆ ಹೀರೋ ಆಗುವ ಕನಸ್ಸಿತ್ತು, ನನ್ನನ್ನು ಹೀರೋ ಮಾಡು ಎಂದು ಕೇಳಿದ್ದ, ನನ್ನ ಬಳಿ ತುಂಬಾ ಆಸ್ತಿ ಇದೆ ಎಂದು ಬಾಲಿವುಡ್ನಲ್ಲಿ ಸುದ್ದಿ ಹಬ್ಬಿಸು ಎಂದು ಆದಿಲ್ ಕೇಳಿದ್ದ. ನನ್ನ ಮೇಲೆ ಅವನಿಗೆ ಅತೀವ ಕೋಪ ಇದೆ, ನಾನು ಬೇರೆ ಹುಡುಗಿಯ ಜೊತೆಗಿರುವ ವಿಡಿಯೋ ನಿನಗೆ ಕಳಿಸ್ತೇನೆ, ಹೃದಯಾಘಾತ ಆಗಿ ಅಲ್ಲೇ ನೀನು ಸಾಯಬೇಕು ಎಂದು ಆದಿಲ್ ಹೇಳಿದ್ದಾನೆ ಎಂದು ರಾಖಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಸುಪಾರಿ ಕೊಟ್ಟು ಟ್ರಕ್ ಹರಿಸಿ ನಿನ್ನನ್ನು ಕೊಲ್ತೇನೆ ಎಂದು ಆದಿಲ್ ಬೆದರಿಕೆ ಹಾಕಿದ್ದಾನೆ. ಆದಿಲ್ಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದೆ, ಅದರ ಪತ್ರಗಳು ನನಗೆ ಸಿಕ್ಕಿದೆ, ಹುಡುಗಿಯೊಬ್ಬಳು ನನಗೆ ಕರೆ ಮಾಡಿ, ಆದಿಲ್ ನನಗೂ ಮುಸ್ಲಿಂ ಆಗುವಂತೆ ಹೇಳಿದ್ದ ಎಂದಿದ್ದಾಳೆ ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.
ಆದಿಲ್ನನ್ನು ಎಂದಿಗೂ ಪ್ರೀತಿಸುತ್ತೇನೆ ಅವನು ನನ್ನ ಪತಿ, ನಾನು ದುಃಖವನ್ನು ಎಲ್ಲರ ಜೊತೆ ಹೇಳಿಕೊಳ್ತೇನೆ, ಕೆಲವೊಬ್ಬರು ಹೇಳೋದಿಲ್ಲ, ಎಲ್ಲರ ಮನೆಯಲ್ಲೂ ಸಮಸ್ಯೆ ಇದ್ದಿದ್ದೆ. ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ, ನನಗೆ ಜೀವನದಲ್ಲಿ ಇನ್ನೇನೂ ಇಲ್ಲ ಆಗಲೇ ಸತ್ತಂತ ಅನುಭವ ಆಗುತ್ತಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.