ರಸ್ತೆ ಬಿಟ್ಟು ತೋಟಕ್ಕೆ ನುಗ್ಗಿದ ಆಂಬ್ಯುಲೆನ್ಸ್!

ಹೊಸದಿಗಂತ ವರದಿ, ಮಡಿಕೇರಿ:

ಚಾಲಕನ ನಿಯಂತ್ರಣ ತಪ್ಪಿದ 108 ಆಂಬ್ಯುಲೆನ್ಸ್ ಹೆದ್ದಾರಿ ಬದಿಯ ತೋಟದೊಳಗೆ ನುಗ್ಗಿದ ಘಟನೆ ಸುಂಟಿಕೊಪ್ಪ ಸಮೀಪದ‌ ಮಾರುತಿನಗರದಲ್ಲಿ ನಡೆದಿದೆ.
ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದ ಆಂಬ್ಯುಲೆನ್ಸ್ 7ನೇ ಹೊಸಕೋಟೆ ಬಳಿಯ ಮಾರುತಿ ನಗರ ಬಡಾವಣೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ತೋಟದೊಳಗೆ ನುಗ್ಗಿದೆ.
ಪಕ್ಕದಲ್ಲೇ ಮನೆ ಇತ್ತಾದರೂ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಕೆಲವು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತ್ತು.
ಆಂಬ್ಯುಲೆನ್ಸ್ ನಲ್ಲಿ ಚಾಲಕರೊಬ್ಬರೇ ಇದ್ದಾಗ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಎದುರಾಗಿಲ್ಲ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!