ಅಮರೇಗೌಡರ ಬಳಿ ಹಣ, ದೊಡ್ಡನಗೌಡರ ಬಳಿ ಜನ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ,ಕುಷ್ಟಗಿ:

ದೊಡ್ಡನಗೌಡರ ಬಳಿ ದುಡ್ಡಿಲ್ಲದಿದ್ದರೂ ಜನ ಇದ್ದಾರೆ. ಅಮರೇಗೌಡರ ಬಳಿ ದುಡ್ಡಿದೆ. ಆದರೆ, ಜನ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ನಗರದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕುಷ್ಟಗಿ ಕ್ಷೇತ್ರದಲ್ಲಿ 2018ರಲ್ಲಿ ನಾನು ಪ್ರಚಾರಕ್ಕೆ ಬಂದಿದ್ದೆ. ಹಲವು ಕಾರಣಗಳಿಂದ ದೊಡ್ಡನಗೌಡ ಸೋತರು‌. ಈ ಬಾರಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಭಾರತ ಅಖಂಡವಾಗಿದೆ. ಎಲ್ಲಿಂದ ತೆಗೆದುಕೊಂಡು ಹೋಗಿ ಎಲ್ಲಿಗೆ ಜೋಡಿಸುತ್ತೀರಿ. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ಮಟಾಷ್. ಅವರ ಕಾಲ್ಗುಣ ಅಂತಹದ್ದು. ತುಂಗಭದ್ರೆಯ ಬಗ್ಗೆ ಯಾವತ್ತಾದರೂ ಚಿಂತಿಸಿದ್ದಿರಾ. ಹಲವು ವರ್ಷಗಳ ಕಾಲ ಈ ದೇಶದಲ್ಲಿ ರಾಜ್ಯದಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್ ಏನಾದರೂ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದ 7 ಜಿಲ್ಲೆಗೆ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಮುಂದಿನ ಬಜೆಟ್ ನಲ್ಲಿ 5 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದಾರೆ. ಕಕ ಜನರ ಅಭಿವೃದ್ಧಿಗ್ಗೆ ಕಂಕಣಬದ್ದರಾಗಿ ನಿಂತಿದ್ದಾರೆ. ಪ.ಜಾ, ಪ.ಪಂಗಡದ ಜನರಿಗೆ ಅವರ ಮಕ್ಕಳಿಗೆ ವಿವಿಧ ವಿದ್ಯಾರ್ಥಿ ವೇತನ ನೀಡಿದರು. ಕಟ್ಟಡ ಕಾರ್ಮಿಕರಿಗೆ ಉಚಿತವಾದ ಬಸ್ ಪಾಸ್ ನೀಡಲಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!