ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ಜನನ್ಮೋಹನ್ ರೆಡ್ಡಿ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಸಂಬಂಧ ಎಲ್ಲಾ ೨೪ ಸಚಿವರು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರಗಳು ರಾಜಭವನ ತಲುಪಿದೆ. 11 ಗಂಟೆಯ ಬಳಿಕ ರಾಜ್ಯಪಾಲರು ಸಚಿವರ ರಾಜೀನಾಮೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ. ಮಧ್ಯಾಹ್ನದ ಒಳಗೆ ನೂತನ ಸಚಿವರ ಅಂತಿಮ ಪಟ್ಟಿ ಸಿದ್ದಗೊಳಿಸಿ ಹೊಸ ಸಚಿವರಿಗೆ ಸಿಎಂ ಜಗನ್ ಮಾಹಿತಿ ನೀಡಲಿದ್ದಾರೆ.
ಪ್ರಸ್ತುತ ಶೇ.56ರಷ್ಟಿರುವ ಬಿ.ಸಿ., ಎಸ್., ಎಸ್ಟಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಹಾಲಿ ಸಚಿವ ಸಂಪುಟದಲ್ಲಿರುವ 10 ಮಂದಿ ಮುಂದುವರಿಯುವ ಸಾಧ್ಯತೆ ಇದೆ.
ಸಿಎಂ ಜಗನ್ ಎಲ್ಲಾ ಸಚಿವರ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಭಾನುವಾರ 25 ಜನರ ಹೊಸ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಕ್ಯಾಬಿನೆಟ್ ಸ್ಥಾನ ಪಡೆದವರಿಗೆ ಭಾನುವಾರ ಮುಖ್ಯಮಂತ್ರಿ ಕಚೇರಿಯಿಂದ ಕರೆ ಮೂಲಕ ಮಾಹಿತಿ ನೀಡಲಾಗುತ್ತದೆ. ಸೋಮವಾರ ಬೆಳಗ್ಗೆ 11.31ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಾತ್ಕಾಲಿಕ ಸೆಕ್ರೆಟರಿಯೇಟ್ನಲ್ಲಿ ಬ್ಲಾಕ್ – 1 ರ ಪಕ್ಕದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ