ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಸಾಕ್ಷ್ಯಗಳಿಗೂ, ಮರಣೋತ್ತರ ವರದಿಗೂ ಇದೆ ಲಿಂಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಾಖಂಡ್ ನ ರೆಸಾರ್ಟ್‌ನಲ್ಲಿ ಹತ್ಯೆಯಾದ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಸಿಕ್ಕಿದ್ದು, ಹಲವು ರೋಚಕ ವಿಚಾರಗಳು ಬಹಿರಂಗವಾಗಿದೆ.

ವಿಶೇಷ ತನಿಖಾ ತಂಡ ಕಲೆ ಹಾಕಿರುವ ಸಾಕ್ಷ್ಯಗಳಿಗೂ, ಮರಣೋತ್ತರ ವರದಿ ಹೊಂದಿಕೆಯಾಗುತ್ತಿದೆ. ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಮೇಲಿನ ಆರೋಪಗಳಿಗೆ ಮತ್ತಷ್ಟು ಸಾಕ್ಷ್ಯ ಸಿಕ್ಕಿದಂತಾಗಿದೆ. ಪ್ರಕರಣ ತನಿಖೆ ಮತ್ತಷ್ಟು ಚುರುಕುಗೊಂಡಿದೆ ಎಂದು ಎಸ್ಐಟಿ ಇನ್‌ಚಾರ್ಜ್ ಡಿಜಿ ರೇಣುಕಾ ದೇವಿ ಹೇಳಿದ್ದಾರೆ.

‘ನಾವು ಕಲೆ ಹಾಕಿರುವಎಲ್ಲಾ ಸಾಕ್ಷ್ಯಗಳಿಗೆ ಪೂರವಾಗಿ ಮರಣೋತ್ತರ ವರದಿ ಬಂದಿದೆ. ಇನ್ನು ಮರಣೋತ್ತರ ಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ವೈದ್ಯರ ತಂಡದಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವ ಎಲ್ಲಾ ಪ್ರಕ್ರಿಯೆಗಳು ಎಸ್ಐಟಿ ಸುಪರ್ದಿಯಲ್ಲಿ ನಡೆದಿದೆ ಎಂದು ರೇಣುಕಾ ದೇವಿ ಹೇಳಿದ್ದಾರೆ.

ಅಂಕಿತಾ ಹತ್ಯೆಯ ಆರೋಪಿಯಾದ ರೆಸಾರ್ಚ್‌ ಒಡೆಯ ಪುಳಕಿತ್‌ ಆರ್ಯ ಹಾಗೂ ಹತ್ಯೆಯಲ್ಲಿ ಸಹಕರಿಸಿದ ಇಬ್ಬರು ಸಿಬ್ಬಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
ಇದಲ್ಲದೇ ಉತ್ತರಾಖಂಡ ಮಾಟಿ ಕಲಾ ಬೋರ್ಡಿನ ಮುಖ್ಯಸ್ಥ ಸ್ಥಾನದಿಂದ ವಿನೋದ್‌ ಆರ್ಯ ಅವರನ್ನು ಹಾಗೂ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಅಂಕಿತ್‌ ಆರ್ಯ ಅವರನ್ನು ವಜಾಗೊಳಿಸಲಾಗಿದೆ. ರೆಸಾರ್ಚ್‌ ಮೇಲೆ ಉತ್ತರಾಖಂಡ ಸರ್ಕಾರ ಬುಲ್ಡೋಜರ್‌ ಚಲಾಯಿಸಿ ಅದನ್ನು ಧ್ವಂಸಗೊಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!