ಬೇಕಂತ ಅಲ್ಲದೇ ಓಡಾಡುವಾಗ ಯಾರಿಗಾದರೂ ಕಾಲು ತಾಗಿಸಿಬಿಟ್ಟರೆ ತಕ್ಷಣ ಅವರನ್ನು ಮುಟ್ಟಿ ನಮಸ್ಕರಿಸುತ್ತೇವೆ. ಇದು ಪ್ರಾಣಿಗಳೇ ಆಗಿರಬಹುದು, ನಮಗಿಂತ ಚಿಕ್ಕವರೇ ಇರಬಹುದು. ಹೀಗೆ ಮಾಡೋದ್ಯಾಕೆ?
ಪ್ರತಿಯೊಬ್ಬರನ್ನೂ ದೇವರು ಸೃಷ್ಟಿಸಿದ್ದಾರೆ ಎಂದು ನಂಬಿಕೆ ಇಟ್ಟಿದ್ದೇವೆ. ಯಾರಿಗಾದರೂ ಕಾಲಿನಿಂದ ಒದ್ದರೆ ಅಥವಾ ತಾಗಿಸಿದರೆ ಅವರಲ್ಲಿರುವ ದೈವಿ ಗುಣಗಳಿಗೆ ಗೌರವ ತೋರದೇ ಇದ್ದಂತೆ. ಗೊತ್ತಿಲ್ಲದೇ ಮುಟ್ಟಿದರೆ ತಕ್ಷಣ ನಮಸ್ಕರಿಸಿ, ಕ್ಷಮೆ ಕೇಳಲಾಗುತ್ತದೆ.