ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ಖಾಸಗಿ ಹೋಟೆಲ್ ನಲ್ಲಿ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ಗೋಕುಲ ರಸ್ತೆಯ ಮಹಾಂತೇಶ ಶಿರೂರ ಎನ್ನಲಾಗಿದೆ. ಅವನ ಪತ್ನಿ ವನಜಾಕ್ಷಿ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುರೂಜಿ ಜೊತೆ ಮಹಾಂತೇಶ ಕೆಲಸ ಮಾಡುತ್ತಿದ್ದ, 2016 ರಲ್ಲಿ ಬಿಟ್ಟಿದ್ದ ಎನ್ನಲಾಗುತ್ತಿದೆ. ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ವನಜಾಕ್ಷಿಯನ್ನು 2019ರಲ್ಲಿ ಮಹಾಂತೇಶ ಮದುವೆಯಾಗಿದ್ದ. ಗುರೂಜಿಯೇ ಇಬ್ಬರ ಮದುವೆ ಮಾಡಿಸಿದ್ದರು.
ಗುರೂಜಿ ಜೊತೆ ವ್ಯವಹಾರದ ನಂಟು ಇಟ್ಟುಕೊಂಡಿದ್ದ ಮಹಾಂತೇಶ, ಇತ್ತೀಚೆಗೆ ಅದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದೇ ವಿಷಯದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಗುರೂಜಿ ಸೋದರನ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ